ADVERTISEMENT

ನೀರಾವರಿ ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ಎಇಇ ಮನೆಗಳ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 5:50 IST
Last Updated 20 ಮಾರ್ಚ್ 2018, 5:50 IST
ಕಲಬುರ್ಗಿಯ ಭಗವತಿ ನಗರದಲ್ಲಿರುವ ವಿಜಯಕುಮಾರ್ ಮನೆ
ಕಲಬುರ್ಗಿಯ ಭಗವತಿ ನಗರದಲ್ಲಿರುವ ವಿಜಯಕುಮಾರ್ ಮನೆ   

ಕಲಬುರ್ಗಿ: ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಕಾರಂಜಾ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌(ಎಇಇ) ವಿಜಯಕುಮಾರ್ ಅವರ ಕಲಬುರ್ಗಿ ಮನೆ ಮೇಲೆ  ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.

ಇಲ್ಲಿನ ಭಗವತಿ ನಗರದಲ್ಲಿರುವ ಮನೆ, ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬಾ ಗ್ರಾಮದ ಮನೆ ಹಾಗೂ ಹುಮನಾಬಾದನಲ್ಲಿರುವ ಕಚೇರಿ ಸೇರಿ ಮೂರು ಕಡೆ  ಏಕಕಾಲಕ್ಕೆ ದಾಳಿ ಮಾಡಿರುವ ಅಧಿಕಾರಿಗಳು, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.

ಮುಚಳಂಬಾ, ವಿಜಯಕುಮಾರ್ ಅವರ ಸ್ವಗ್ರಾಮವಾಗಿದೆ.

ADVERTISEMENT

ಬೀದರ್ ಎಸಿಬಿ ಡಿವೈಎಸ್ಪಿ ವೀರೇಶ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
**
ಎಇಇ ಮನೆ ಮೇಲೆ ಎಸಿಬಿ ದಾಳಿ
ಬೆಳಗಾವಿ: ಇಲ್ಲಿನ ಸ್ಮಾರ್ಟ್ ಸಿಟಿ ಯೋಜನೆಯ ಎಇಇ ಕಿರಣ್ ಸುಬ್ಬರಾವ್ ಭಟ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.


ಕಿರಣ್ ಸುಬ್ಬರಾವ್ ಭಟ್

ರಾಣಿ ಚನ್ನಮ್ಮ ನಗರದಲ್ಲಿರುವ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದೆ. ಅವರು ಈ ಹಿಂದೆ ನಗರಪಾಲಿಕೆಯ ಎಇಇ ಆಗಿದ್ದರು.

ಅಕ್ರಮ ಆಸ್ತಿ ಗಳಿಕೆ ಬಗ್ಗೆ ದೂರು ಬಂದಿರುವುದರಿಂದ ದಾಳಿ ನಡೆಸಲಾಗಿದೆ. ಬೆಳಗಾವಿ ವಿಭಾಗದ ಎಸ್ಪಿ ಅಮರನಾಥರೆಡ್ಡಿ ಹಾಗೂ ಡಿವೈಎಸ್ಪಿ ರಘು ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.