ADVERTISEMENT

ನೀಲಗಿರಿ ತೋಪಿಗೆ ಬೆಂಕಿ: ವ್ಯಕ್ತಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 9:01 IST
Last Updated 12 ಮಾರ್ಚ್ 2018, 9:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರಟಗೆರೆ: ತಾಲ್ಲೂಕಿನ ಡಿ.ನಾಗೇನಹಳ್ಳಿ ಹತ್ತಿರ ವೃದ್ಧರೊಬ್ಬರು ಭಾನುವಾರ ಸಂಜೆ ಸಜೀವ ದಹನವಾಗಿದ್ದಾರೆ. ನಾರಾಯಣಪ್ಪ(70) ಮೃತಪಟ್ಟವರು.

ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇವರ ಜಮೀನಿದ್ದು, ಅದರ ಪಕ್ಕವೇ ನೀಲಗಿರಿ ತೋಪು ಇದೆ. ನಿರ್ಜನ ಪ್ರದೇಶವಾಗಿದೆ. ಅಲ್ಲಿಗೆ ದನಗಳನ್ನು ಮೇಯಿಸಲು ಎಂದಿನಂತೆ ಭಾನುವಾರವೂ ನಾರಾಯಣಪ್ಪ ಹೋಗಿದ್ದರು. ಅವರ ಕಾಲು ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿತ್ತು ಎಂದು ಕೋಳಾಲ ಠಾಣೆ ಸಬ್ ಇನ್‌ಸ್ಪೆಕ್ಟರ್ ಸಂತೋಷ್ ತಿಳಿಸಿದರು.

ಬೇಸಿಗೆ ಕಾಲದಲ್ಲಿ ನೀಲಗಿರಿ ತೋಪಿನಲ್ಲಿನ ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ. ಭಾನುವಾರವೂ ಯಾರೊ ಹಚ್ಚಿದ ಬೆಂಕಿ ವ್ಯಾಪಿಸಿಕೊಂಡಿದೆ. ನಾರಾಯಣಪ್ಪ ಅವರು ಅದರಿಂದ ಹೊರಬರಲಾಗದೇ ಸಜೀವ ದಹನವಾಗಿದ್ದಾರೆ ಎಂದು ಸಬ್ ಇನ್‌ಸ್ಪೆಕ್ಟರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.