ಪಾವಗಡ: ಮಕ್ಕಳನ್ನು ಅಪಹರಿಸಿ ಕಿಡ್ನಿ ಸೇರಿದಂತೆ ಅಂಗಾಗ ಕದಿಯುತ್ತಾರೆ ಎಂಬ ವಾಟ್ಸ್ ಆ್ಯಪ್ ಸಂದೇಶ ತಾಲ್ಲೂಕಿನ ದೊಡ್ಡಹಳ್ಳಿ, ಪೊನ್ನಸಮುದ್ರದಲ್ಲಿ ಜನರಲ್ಲಿ ಭೀತಿ ಸೃಷ್ಟಿಸಿದೆ.
ಆಂಧ್ರಪ್ರದೇಶದಿಂದ ಮಕ್ಕಳ ಕಳ್ಳರು ಬರುತ್ತಾರೆ. ರಾತ್ರಿ ಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂಬ ವಾಟ್ಸ್ಅ್ಯಪ್ ಸಂದೇಶವೇ ಈ ಭೀತಿಗೆ ಕಾರಣವಾಗಿದೆ.
ಕಾಕತಾಳೀಯ ಎಂಬಂತೆ ಭಾನುವಾರ ರಾತ್ರಿ ದೊಡ್ಡಹಳ್ಳಿಯಲ್ಲಿ ಯುವತಿ ನಾಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ.
ಆದರೆ, ಪೊಲೀಸರು ಇಂತಹ ಪ್ರಕರಣ ನಡೆದಿಲ್ಲ. ಬರೀ ಉಹಾಪೋಹ. ಗ್ರಾಮಸ್ಥರಲ್ಲಿನ ಭೀತಿ ಹೋಗಲಾಡಿಸಲಾಗುವುದು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.