ADVERTISEMENT

ಪೊಲೀಸ್‌ ಜೀಪ್‌–ಲಾರಿ ಮುಖಾಮುಖಿ ಡಿಕ್ಕಿ: ಡಿವೈಎಸ್‌ಪಿ ಸೇರಿ ಮೂವರ ಸಾವು

ಚುನಾವಣಾ ಕರ್ತವ್ಯಕ್ಕಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಪ್ರಯಾಣಿಸುತ್ತಿದ್ದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 10 ಮೇ 2018, 8:56 IST
Last Updated 10 ಮೇ 2018, 8:56 IST
ಪೊಲೀಸ್‌ ಜೀಪ್‌–ಲಾರಿ ಮುಖಾಮುಖಿ ಡಿಕ್ಕಿ: ಡಿವೈಎಸ್‌ಪಿ ಸೇರಿ ಮೂವರ ಸಾವು
ಪೊಲೀಸ್‌ ಜೀಪ್‌–ಲಾರಿ ಮುಖಾಮುಖಿ ಡಿಕ್ಕಿ: ಡಿವೈಎಸ್‌ಪಿ ಸೇರಿ ಮೂವರ ಸಾವು   

ಬಾಗಲಕೋಟೆ: ಮಧ್ಯರಾತ್ರಿ ಬಾಗಲಕೋಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಡಿವೈಎಸ್‌ಪಿ ಸೇರಿ ಮೂರು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಲಾರಿ ಹಾಗೂ ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ಸಿಐಡಿ ಡಿವೈಎಸ್‌ಪಿ ಬಾಳೇಗೌಡ(55), ಸಿಐಡಿ ಪಿಎಸ್‌ಐ ಕೆ.ಎಚ್.ಶಿವಸ್ವಾಮಿ(55) ಹಾಗೂ ಚಾಲಕ ವೇಣು ಗೋಪಾಲ(25) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಕರ್ತವ್ಯಕ್ಕಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಬರುವಾರ ಮಾರ್ಗಮಧ್ಯೆ ಮಧ್ಯರಾತ್ರಿ 12.30ಕ್ಕೆ ಅಪಘಾತ ಸಂಭವಿಸಿದೆ.

ADVERTISEMENT

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಡಿವೈಎಸ್‌ಪಿ ಗಿರೀಶ ಸೇರಿದಂತೆ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಿವೈಎಸ್‌ಪಿ ಬಾಳೆಗೌಡ ಬೆಂಗಳೂರಿನ ಕೊಟ್ಟಿಗೆಪಾಳ್ಯಾ ನಿವಾಸಿ, ಸಿಪಿಐ ಕೆ.ಎಚ್‌.ಶಿವಸ್ವಾಮಿ ಚಾಮರಾಜನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಚಾಲಕ ಸಹ ಬೆಂಗಳೂರು ಮೂಲದವರು ಎನ್ನಲಾಗಿದೆ.

ಬಡ್ತಿ ನೀಡಿ ಸಿಐಡಿಗೆ: ತುಮಕೂರು, ಕುಣಿಗಲ್‌ನಲ್ಲಿ ವೃತ್ತನೀರಿಕ್ಷಕರಾಗಿ ಕರ್ತವ್ಯ ನಿರ್ವಸಿದ್ದ ಬಾಳೇಗೌಡ ಅವರಿಗೆ ಇತ್ತೀಚೆಗಷ್ಟೇ ಡಿವೈಎಸ್‌ಪಿ ಆಗಿ ಬಡ್ತಿ ನೀಡಿ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.