ADVERTISEMENT

ಪ್ರತಾಪ್ ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಆತನನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯಬೇಕು: ಸಚಿವ ವಿನಯ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 9:53 IST
Last Updated 4 ಡಿಸೆಂಬರ್ 2017, 9:53 IST
ಪ್ರತಾಪ್ ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಆತನನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯಬೇಕು: ಸಚಿವ ವಿನಯ ಕುಲಕರ್ಣಿ
ಪ್ರತಾಪ್ ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಆತನನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯಬೇಕು: ಸಚಿವ ವಿನಯ ಕುಲಕರ್ಣಿ   

ಧಾರವಾಡ: ‘ಸಂಸದ ಪ್ರತಾಪ್‌ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಮೊದಲು ಆತನನ್ನು ಹುಚ್ಚಾಸ್ಪತ್ರೆಗೆ ಕರೆದುಕೊಂಡು ಹೋಗಬೇಕು’ ಎಂದು ಸಚಿವ ವಿನಯ ಕುಲಕರ್ಣಿ ಲೇವಡಿ ಮಾಡಿದರು.

ಧಾರವಾಡದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರ ವ್ಯಕ್ತಿತ್ವ ಜನತೆಗೆ ತಿಳಿಯುತ್ತಿದೆ’ ಎಂದರು.

ಒನಕೆ ಓಬವ್ವ, ಚೆನ್ನಮ್ಮಗೆ ಅವಮಾನ ಮಾಡಿದಾಗ ಬಿಜೆಪಿ ನಾಯಕರು ಮಾತನಾಡಿದಾಗಲೂ ಬಿಜೆಪಿ ನಾಯಕರಾರು ಚಕಾರ ಎತ್ತಿಲ್ಲ. ಬೇರೆ ಪಕ್ಷದವರಾದರೂ ಮಾಡಿದ್ದರೆ ಈಗಾಗಲೇ ಮುತ್ತಿಗೆ ಪ್ರತಿಭಟನೆಗಳನ್ನು ರಾಜ್ಯಾದ್ಯಂತ ಮಾಡ್ತಾಇದ್ರು. ಆದರೆ, ಈಗ ಪ್ರಹ್ಲಾದ್ ಜೋಶಿ ಅವರು ತುಟಿ ಬಿಚ್ಚುತ್ತಿಲ್ಲ. ಕಲಬುರ್ಗಿ ಅವರ ಹತ್ಯೆ ಆದಾಗಲೂ ಬಿಜೆಪಿ ಮಾತಾಡಿಲ್ಲ. ಈಗ ಚುನಾವಣೆ ಹತ್ತಿರವಾದಂತೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.