ADVERTISEMENT

ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಉದಾರ ಕೊಡುಗೆ ನೀಡಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಉದಾರ ಕೊಡುಗೆ ನೀಡಿ
ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಉದಾರ ಕೊಡುಗೆ ನೀಡಿ   

ಪ್ರಜಾವಾಣಿ – ಡೆಕ್ಕನ್‌ ಹೆರಾಲ್ಡ್‌ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸ್ಥಾಪಿಸಿರುವ ಟ್ರಸ್ಟ್‌, ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತ ಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್‌ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು ‘Deccan Herald-Prajavani Relief Trust’ ಹೆಸರಿಗೆ ಕಳುಹಿಸಬಹುದು.

ಆನ್‌ಲೈನ್‌ನಲ್ಲಿ www.prajavani.net/edurelief/index.html  ಮೂಲಕವೂ ಹಣ ವರ್ಗಾಯಿಸುವ ಸೌಲಭ್ಯ ಇದೆ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ನಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್‌ 80 ಜಿ ಅನ್ವಯ ಶೇ 50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ.

2017ರ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಮಾತ್ರ ಈ ನೆರವು ಕೋರಿ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ವಿಳಾಸ, ಮೊಬೈಲ್‌ ಸಂಖ್ಯೆ ಮತ್ತಿತರ ವಿವರಗಳಿರಬೇಕು. ಲಕೋಟೆ ಮೇಲೆ ‘ಶೈಕ್ಷಣಿಕ ನೆರವಿಗೆ ಅರ್ಜಿ’ ಎಂದು ಬರೆಯಬೇಕು.

ADVERTISEMENT

‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

‘ಪ್ರಜಾವಾಣಿ– ಡೆಕ್ಕನ್‌ಹೆರಾಲ್ಡ್’ ಸಂಸ್ಥೆ ನೀಡಿದ ಆರ್ಥಿಕ ನೆರವಿನಿಂದ ಕಾಲೇಜು ಶುಲ್ಕ ಪಾವತಿಸಿದೆ. ಉಳಿದ ಹಣವನ್ನು ಸಿಇಟಿ ವ್ಯಾಸಂಗ ಮಾಡಲು ಪಠ್ಯ ಪುಸ್ತಕಗಳನ್ನು ಖರೀದಿಸಿದೆ. ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಸಿಕ್ಕರೂ ಅಷ್ಟೂ ಪ್ರಮಾಣದ ಶುಲ್ಕ ಪಾವತಿಸಲು ಕಷ್ಟವಾಗುತ್ತದೆ. ಅಂತಹ ಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಆರ್ಥಿಕ ಧನ ಸಹಾಯ ತುಂಬಾ ಉಪಯುಕ್ತವಾಗಿದೆ.
–ಎಚ್.ಎಂ.ಆಷಿಕಾ,ಅರಸೀಕೆರೆ

ಕಾಲೇಜಿನ ಸಮವಸ್ತ್ರ ಹಾಗೂ ಸಿಇಟಿ ಅಗತ್ಯವಿದ್ದ ಪಠ್ಯ ಪುಸ್ತಕಗಳನ್ನು
ಖರೀದಿಸಿದೆ. ಉನ್ನತ ವಿದ್ಯಾಭ್ಯಾಸದ ನಿರೀಕ್ಷೆ ಇಟ್ಟು ಕೊಂಡಂತಹ ಬಡ ಕುಟುಂಬದ ಮಕ್ಕಳಿಗೆ ಸಂಸ್ಥೆ ನೀಡುವ ಆರ್ಥಿಕ ನೆರವು ತುಂಬಾ ಅನುಕೂಲವಾಗುತ್ತಿದೆ. ಪಡೆದ ಹಣವನ್ನು ಸರಿಯಾಗಿ ಬಳಸಿಕೊಂಡಿದ್ದರ ಬಗ್ಗೆ ಖುಷಿ ಇದೆ. ಬಡ ಮಕ್ಕಳಿಗೆ ನೀಡುವ ನೆರವು ಮುಂದುವರಿಯಲಿ ಎಂಬುದು ನನ್ನ ವಿನಂತಿ.
–ಎಚ್‌.ಟಿ.ದೀವಿತ್,ಹಾಸನ

‘ಪ್ರಜಾವಾಣಿ’ ನೆರವು ಸಿಕ್ಕಿದ್ದರಿಂದ ಶುಲ್ಕ ಕಟ್ಟಲು ಅನುಕೂಲವಾಯಿತು. ಸದ್ಯ ಹನೂರಿನ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ಪ್ರಥಮ ಪಿಯುಸಿಯಲ್ಲಿ ಶೇ 80ರಷ್ಟು ಅಂಕ ಬಂದಿದೆ. ಎಂಜಿನಿಯರ್‌ ಆಗುವ ಕನಸಿದೆ.
–ವೈ.ಎಸ್‌.ವಿಜಯ್‌ ಯಳಂದೂರು

ವಿಳಾಸ

ಮ್ಯಾನೇಜರ್‌, ಡೆಕ್ಕನ್‌ ಹೆರಾಲ್ಡ್‌–
ಪ್ರಜಾವಾಣಿ ಪರಿಹಾರ ಟ್ರಸ್ಟ್‌
ನಂ. 75, ಮಹಾತ್ಮ ಗಾಂಧಿ ರಸ್ತೆ,
ಬೆಂಗಳೂರು–560001.

ಸೂಚನೆ
ದೇಣಿಗೆ ನೀಡುವವರು ಲಕೋಟೆ ಮೇಲೆ ‘ಶೈಕ್ಷಣಿಕ ನೆರವಿಗೆ ಕೊಡುಗೆ’ ಎಂದು ನಮೂದಿಸಲು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.