ADVERTISEMENT

ಬಾದಾಮಿಯ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ ಸ್ಮರಿಸಿದ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ ತಂತ್ರ; ಶೋಭಾ ಕರಂದ್ಲಾಜೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 13:34 IST
Last Updated 24 ಏಪ್ರಿಲ್ 2018, 13:34 IST
ಸಿದ್ದರಾಮಯ್ಯ– ಚಿತ್ರ ಕೃಪೆ: ಎಎನ್ಐ
ಸಿದ್ದರಾಮಯ್ಯ– ಚಿತ್ರ ಕೃಪೆ: ಎಎನ್ಐ   

ಬೆಂಗಳೂರು: ಬಾದಾಮಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ, ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಆಡಳಿತವನ್ನು ಸ್ಮರಿಸಿ ಟ್ವೀಟಿಸಿದ್ದಾರೆ.

ವಾತಾಪಿ(ಬಾದಾಮಿ) ಚಾಲುಕ್ಯರ ರಾಜಧಾನಿಯಾಗಿತ್ತು. ‘ನನ್ನನ್ನು ನಾನು ಬಾದಾಮಿ ಜನರ ಕೈಗಳಲ್ಲಿ ಇಟ್ಟಿರುವ ಸಂದರ್ಭದಲ್ಲಿ ಉತ್ತರ ಭಾರತದ ಬಲಶಾಲಿ ದೊರೆಯಾಗಿದ್ದ ಹರ್ಷವರ್ಧನನ್ನು ನರ್ಮದಾ ತೀರದಲ್ಲಿ ಇಮ್ಮಡಿ ಪುಲಕೇಶಿ ಸೋಲಿಸಿದ್ದು ನೆನಪಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT