ADVERTISEMENT

ಬಾಲಕನ ಕೆನ್ನೆ ಕಿತ್ತ ಬೀದಿನಾಯಿಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 9:22 IST
Last Updated 26 ಅಕ್ಟೋಬರ್ 2017, 9:22 IST
ಬಾಲಕನ ಕೆನ್ನೆ ಕಿತ್ತ  ಬೀದಿನಾಯಿಗಳು
ಬಾಲಕನ ಕೆನ್ನೆ ಕಿತ್ತ ಬೀದಿನಾಯಿಗಳು   

ಸೇಡಂ (ಕಲಬುರ್ಗಿ ಜಿಲ್ಲೆ): ಪಟ್ಟಣದಲ್ಲಿ ಮಂಗಳವಾರ ಸಂಜೆ ಬೀದಿನಾಯಿಗಳು ರೆಹಮತ್ ನಗರದ ಮೂರು ವರ್ಷದ ಬಾಲಕ ಮಹ್ಮದ್ ತಬರೇಜ್ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮಾಂಸದ ಅಂಗಡಿ ಮುಂದೆ 50-60 ನಾಯಿಗಳು ನಿತ್ಯ ನಿಲ್ಲುತ್ತವೆ. ಹಿಂದೆಯೂ ಕೆಲವರಿಗೆ ಕಚ್ಚಿವೆ. ಮಾಂಸದ ಅಂಗಡಿ ಸ್ಥಳಾಂತರಿಸಬೇಕು ಹಾಗೂ ಗಾಯಗೊಂಡ ಬಾಲಕನ ಕುಟುಂಬಕ್ಕೆ ಪರಿಹಾರ ಮತ್ತು ವೈದ್ಯಕೀಯ ವೆಚ್ಚ ಭರಿಸಬೇಕು’ ಎಂದು ಅಲ್ಲಿಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಬಿ.ಸುಶೀಲಾ, ಮಾಂಸದ ಅಂಗಡಿ ಮುಚ್ಚುವಂತೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.