ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸೋಮವಾರ ಬಿಡುಗಡೆ ಮಾಡಿದೆ.
ಯಶವಂತಪುರ ಕ್ಷೇತ್ರದಿಂದ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಕನಕಪುರದಿಂದ ನಂದಿನಿ ಗೌಡ ಅವರನ್ನು ಪಕ್ಷ ಆಯ್ಕೆ ಮಾಡಿದ್ದು, ನಾಲ್ಕನೇ ಪಟ್ಟಿಯಲ್ಲಿ ಒಟ್ಟು ಏಳು ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದೆ.
ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಮೂರನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿತ್ತು. ನಾಲ್ಕನೇ ಪಟ್ಟಿಯ ಬಳಿಕವೂ ಬಾದಾಮಿ, ವರುಣಾ ಸೇರಿ 4 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ.
ಬಿಜೆಪಿ ನಾಲ್ಕನೇ ಪಟ್ಟಿ:
* ಭದ್ರಾವತಿ– ಜಿ.ಆರ್.ಪ್ರವೀಣ್ ಪಾಟೀಲ್
* ಯಶವಂತಪುರ– ಜಗ್ಗೇಶ್
* ಬಿ.ಟಿ.ಎಂ.ಲೇಔಟ್– ಲಲ್ಲೇಶ್ ರೆಡ್ಡಿ
* ರಾಮನಗರ– ಎಚ್.ಲೀಲಾವತಿ
* ಕನಕಪುರ– ನಂದಿನಿ ಗೌಡ
* ಬೇಲೂರು– ಎಚ್.ಕೆ.ಸುರೇಶ್
* ಹಾಸನ– ಜೆ.ಪ್ರೀತಂ ಗೌಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.