ADVERTISEMENT

ಬೃಂದಾವನಸ್ಥರಾದ ಸುಯತೀಂದ್ರರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST
ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಶುಕ್ರವಾರ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ  ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು
ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಶುಕ್ರವಾರ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು   

ರಾಯಚೂರು: ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾ­ಧಿಪತಿ ಸುಯ­ತೀಂದ್ರ­ತೀರ್ಥ ಸ್ವಾಮೀಜಿಯವರ ಅಂತ್ಯ­ಸಂಸ್ಕಾರ ಶುಕ್ರವಾರ ಸಂಜೆ ನಡೆಯಿತು. 80 ವರ್ಷದ ಶ್ರೀಗಳು ವೃದ್ಧಾಪ್ಯ, ವಯೋಸಹಜ ನಿಶಕ್ತಿ­ಯಿಂದ ಗುರುವಾರ ಮಧ್ಯ­ರಾತ್ರಿ 12.10ರ ಸುಮಾರಿಗೆ  ಇಹ­ಲೋಕ ತ್ಯಜಿಸಿದ ಸುದ್ದಿ ತಿಳಿ­ಯು­ತ್ತಿದ್ದಂತೆ ಭಕ್ತಾದಿಗಳು ಮಂತ್ರಾಲಯಕ್ಕೆ ಧಾವಿಸಿ ಬಂದರು.

ಪೀಠಾಧಿಪತಿಗಳ ಪೂರ್ವಾಶ್ರಮದ ಪುತ್ರ ಹಾಗೂ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ವೆಂಕಟೇಶ, ಪುತ್ರಿ ಡಾ.ಸಿಂಧು ಜೋಶಿ ಮತ್ತಿತರರು ಅಂತಿಮ ದರ್ಶನ ಪಡೆದರು. ಹಿಂದಿನ ಪೀಠಾಧಿಪತಿ  ಸುಶಮೀಂದ್ರತೀರ್ಥರ ಬೃಂದಾವನ ಪಕ್ಕವೇ ಶ್ರೀ ಮಠದ ಪರಂಪರೆಯಂತೆ ಧಾರ್ಮಿಕ ಕಾರ್ಯ ನೆರವೇರಿಸಿ ಸುಯ­ತೀಂದ್ರರ ಪಾರ್ಥಿವ ಶರೀರ­ವನ್ನು ಇಟ್ಟು ಅದರ ಸುತ್ತ ಬೃಂದಾವನ ನಿರ್ಮಿ­ಸಲಾಯಿತು.  ಸಂಜೆ ನೂತನ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿಯವರು ಈ ಬೃಂದಾವನಕ್ಕೆ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು.

ಪೂರ್ವಾಶ್ರಮದಲ್ಲಿ: ಶ್ರೀ ಸುಯ­ತೀಂದ್ರ­ತೀರ್ಥರ  ಪೂರ್ವಾ­ಶ್ರಮದ ಹೆಸರು ಸುಶೀಲೇಂದ್ರಾಚಾರ್ಯ. ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಪೇಟಾ­ಲೂರು ಗ್ರಾಮದ ಅನಂತಾ­ಚಾರ್ಯ ಹಾಗೂ ಯಮುನಾಬಾಯಿ ಅವರ ಪುತ್ರ. ಬಿಎಸ್‌ಸಿ, ಬಿಇಡಿ ಪದವಿ ಬಳಿಕ ಎಂಜಿನಿಯರಿಂಗ್ ಪದವಿಗೆ ಸರಿ­ಸಮಾ­ನ­ವಾದ ಎಎಂಐಇ ತೇರ್ಗಡೆ­ಯಾ­ದರು. ಮಂತ್ರಾಲಯದ 38ನೇ ಪೀಠಾಧಿಪತಿ ಶ್ರೀ ಸುಶ­ಮೀಂ­­ದ್ರತೀರ್ಥರ ಉತ್ತರಾಧಿ­ಕಾರಿಯಾಗಿ 2006 ಜುಲೈ 4ರಂದು ನೇಮಕ­ಗೊಂಡಾಗ  ಅವರಿಗೆ 72 ವರ್ಷ.  10ಮಾರ್ಚ್‌ 2014­ರಂದು ತಮ್ಮ ಉತ್ತರಾಧಿಕಾರಿ  ಶ್ರೀ ಸುಬು­­ಧೇಂದ್ರ­ತೀರ್ಥರಿಗೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠಕ್ಕೆ ಸಂಬಂಧಪಟ್ಟ ಎಲ್ಲ ಆಡಳಿತ ವ್ಯವಸ್ಥೆ ಅಧಿಕಾರ, ಜವಾಬ್ದಾರಿ ವಹಿಸಿಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.