ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಬೆಂಗಳೂರು 8, ಹೊನಕೆರೆ 7, ಕೊಳ್ಳೆಗಾಲ, ಕೋಲಾರ ತಲಾ 6, ಧರ್ಮಸ್ಥಳ, ಚಿಂಚೋಳಿ, ಯಳಂದೂರು ತಲಾ 5, ಚನ್ನಪಟ್ಟಣ, ಕುಶಾಲನಗರ ತಲಾ 4, ಪಿರಿಯಾಪಟ್ಟಣ, ಟಿ.ನರಸೀಪುರ, ಶ್ರೀರಂಗಪಟ್ಟಣ ತಲಾ 3, ಕೋಟ, ಗೇರುಸೊಪ್ಪ, ಆಗುಂಬೆ, ಆನವಟ್ಟಿ, ರಾಯಲಪಡು, ಮಂಡ್ಯ, ಹೊಸದುರ್ಗ, ಚಿಂತಾಮಣಿ ತಲಾ 2, ಮಂಗಳೂರು, ಕಾರ್ಕಳ, ಬನವಾಸಿ, ಕೊಟ್ಟಿಗೆಹಾರ, ಚಾಮರಾಜನಗರ, ಬೆಳ್ಳೂರು, ಹೊಸಕೋಟೆ, ಬಳ್ಳಾರಿ, ರಾಮನಗರ, ಕನಕಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.
ಕಲಬುರ್ಗಿಯಲ್ಲಿ 33.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು ದಾವಣಗೆರೆಯಲ್ಲಿ 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.