ADVERTISEMENT

ಬೆಂಗಳೂರು ವಿಜ್ಞಾನಿಗಳಿಗೆ ಮೋದಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಬೆಂಗಳೂರು ವಿಜ್ಞಾನಿಗಳಿಗೆ ಮೋದಿ ಪ್ರಶಸ್ತಿ
ಬೆಂಗಳೂರು ವಿಜ್ಞಾನಿಗಳಿಗೆ ಮೋದಿ ಪ್ರಶಸ್ತಿ   

ನವದೆಹಲಿ (ಪಿಟಿಐ): ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಭೌತವಿಜ್ಞಾನಿ ಎ.ಕೆ. ಸೂದ್ ಹಾಗೂ ಭೂವಿಜ್ಞಾನಿ ಕೆ. ಎಸ್. ವಾಲ್ದಿಯಾ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಂಶೋಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಗುಜರ್ ಮಲ್ ಮೋದಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯು 2.01 ಲಕ್ಷ ನಗದು, ಬೆಳ್ಳಿಯ ಸ್ಮರಣ ಫಲಕ ಹಾಗೂ ಭಿನ್ನವತ್ತಳೆ ಒಳಗೊಂಡಿದೆ.
ದಿವಂಗತ ಗುಜರ್ ಮಲ್ ಅವರ 110ನೇ ಜನ್ಮ ದಿನಾಚರಣೆಯ ದಿನ ಆಗಸ್ಟ್ 7ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೋದಿ ಸಮೂಹದ ಸಂಸ್ಥೆಗಳ ಸ್ಥಾಪಕರಾದ ಅವರ ಸ್ಮರಣಾರ್ಥ 1988ರಿಂದ ವಿಜ್ಞಾನ ಪ್ರಶಸ್ತಿ ನೀಡಲಾಗುತ್ತಿದೆ.

ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌ನ ಅಧ್ಯಕ್ಷರಾಗಿರುವ ಎ.ಕೆ. ಸೂದ್, ಸಾಂದ್ರೀಕರಿಸಿದ ದ್ರವ್ಯಗಳ ಅಧ್ಯಯನಕ್ಕೆ ಅಸಾಮಾನ್ಯ ಕೊಡುಗೆ ನೀಡಿದ್ದಾರೆ.

ಕೆ. ಎಸ್. ವಾಲ್ದಿಯಾ ಬೆಂಗಳೂರಿನ ಜವಾಹರ್‌ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದಾರೆ. ಭೂವಿಜ್ಞಾನ ಹಾಗೂ ಪರಿಸರ ವಿಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು, ವಿದ್ಯಾರ್ಥಿಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.