ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕು ಗೊಂಡಿದೆ.
ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯಾಗಿದೆ. ಮಡಿಕೇರಿಯಲ್ಲಿ 15 ಸೆಂ.ಮೀ. ಮಳೆಯಾಗಿದೆ.
ನೀಲ್ಕುಂದ, ಆಗುಂಬೆ 12, ಭಾಗ ಮಂಡಲ 11, ಕೊಲ್ಲೂರು, ಮಾದಾ ಪುರ 10, ಕ್ಯಾಸಲ್ ರಾಕ್, ಲಿಂಗನ ಮಕ್ಕಿ 9, ಸುಳ್ಯ, ಗೇರುಸೊಪ್ಪ, ಭಾಲ್ಕಿ, ಸೋಮವಾರಪೇಟೆ, ತಾಳಗುಪ್ಪ 8, ಸಿದ್ದಾಪುರ, ಅಂಕೋಲ, ಶಿರಸಿ, ಮೂರ್ನಾಡು, ನಾಪೋಕ್ಲು, ಪೊನ್ನಂ ಪೇಟೆ, ವಿರಾಜಪೇಟೆ, ಹೊಸನಗರ, ಕಮ್ಮರಡಿಯಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಮಾಣಿ, ಬೆಳ್ತಂಗಡಿ, ಸುಬ್ರಹ್ಮಣ್ಯ, ಭಟ್ಕಳ, ಮೂಲ್ಕಿ, ಗೋಕರ್ಣ, ಔರಾದ್, ಚಿತ್ತಾಪುರ, ಚಿಂಚೋಳಿ, ತೀರ್ಥಹಳ್ಳಿ, ಶೃಂಗೇರಿ, ಕಳಸ, ಜಯ ಪುರ, ಬಾಳೆಹೊನ್ನೂರು 6, ಬಂಟ್ವಾಳ, ಶಿರಾಲಿ, ಹೊನ್ನಾವರ, ಕದ್ರಾ, ಲೋಂಡ, ಸೇಡಂ, ಸಾಗರ, ಕೊಟ್ಟಿಗೆ ಹಾರ, ಕೊಪ್ಪ, ಆವತಿ, ಸರಗೂರು 5, ಮಂಗಳೂರು, ಮೂಡುಬಿದಿರೆ, ಧರ್ಮ ಸ್ಥಳ, ಪುತ್ತೂರು, ಕೋಟ, ಕಾರ್ಕಳ, ಕುಂದಾಪುರ, ಜೋಯಿಡಾ, ಸಿದ್ದಾಪುರ (ಉ.ಕ), ಕುಮಟಾ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಕಾರ ವಾರ, ಬಸವಕಲ್ಯಾಣ 4,
ಉಪ್ಪಿನಂಗಡಿ, ಬೀದರ್, ಕಮಲಾಪುರ, ಗುಲ್ಬರ್ಗ, ಹಾರಂಗಿ, ಕುಶಾಲನಗರ, ತ್ಯಾಗರ್ತಿ, ಅರಸಾಳು, ಹುಂಚದಕಟ್ಟೆ, ಸೊರಬ, ಮೂಡಿಗೆರೆ, ಎನ್.ಆರ್. ಪುರ, ಸಕಲೇಶಪುರ, ಹಾಸನ 3, ಮಂಚಿ ಕೇರಿ, ಬೆಳಗಾವಿ, ಜೇವರ್ಗಿ, ಆನವಟ್ಟಿ, ಶಿಕಾರಿಪುರ, ತರೀಕೆರೆ, ಶ್ರವಣಬೆಳ ಗೊಳ, ಎಚ್.ಡಿ.ಕೋಟೆ, ಬೇಗೂರು, ಯಲಹಂಕ 2,
ಬನವಾಸಿ, ಕಿರವತ್ತಿ, ಯಲ್ಲಾಪುರ, ಖಾನಾಪುರ, ಬೆಳಗಾವಿ ವಿಮಾನ ನಿಲ್ದಾಣ, ಬ್ಯಾಡಗಿ, ರಾಣೆಬೆ ನ್ನೂರು, ಆಳಂದ, ನೆಲಗಿ, ಶಿರಾಳ ಕೊಪ್ಪ, ಭದ್ರಾವತಿ, ಚಿಕ್ಕಮಗಳೂರು, ಅಜ್ಜಂಪುರ, ಲಿಂಗದಹಳ್ಳಿ, ಪಂಚನ ಹಳ್ಳಿ, ಕೊಣನೂರು, ಹೊಳೆನರಸೀಪುರ, ಚನ್ನರಾಯಪಟ್ಟಣ, ಪಿರಿಯಾಪಟ್ಟಣ, ಬಂಡೀಪುರ, ಕೊಳ್ಳೆಗಾಲ, ಬೆಂಗಳೂರು ನಗರ, ಹೆಸರಘಟ್ಟ, ಟಿ.ಜಿ.ಹಳ್ಳಿ, ನೆಲ ಮಂಗಲ, ಸಂತೆಬೆನ್ನೂರಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆ ಗಳಲ್ಲಿ ಕರಾವಳಿಯ ಹಲವೆಡೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂ ಚನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.