ADVERTISEMENT

ಮಹದಾಯಿ ಹೋರಾಟ: ಬೆಂಗಳೂರಿನಿಂದ ನರಗುಂದದವರೆಗೆ ವೈದ್ಯರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 8:24 IST
Last Updated 4 ಮಾರ್ಚ್ 2018, 8:24 IST
ಮಹದಾಯಿ ಹೋರಾಟ: ಬೆಂಗಳೂರಿನಿಂದ ನರಗುಂದದವರೆಗೆ ವೈದ್ಯರ ಪಾದಯಾತ್ರೆ
ಮಹದಾಯಿ ಹೋರಾಟ: ಬೆಂಗಳೂರಿನಿಂದ ನರಗುಂದದವರೆಗೆ ವೈದ್ಯರ ಪಾದಯಾತ್ರೆ   

ಹುಬ್ಬಳ್ಳಿ: ಮಹದಾಯಿ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬೆಂಗಳೂರಿನಿಂದ ನರಗುಂದದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಭಾನುವಾರ ಹುಬ್ಬಳ್ಳಿ ತಲುಪಿತು.

ಐಎಂಎ ಹುಬ್ಬಳ್ಳಿ ಘಟಕ ಅಧ್ಯಕ್ಷ ಜಿ.ಬಿ.ಸತ್ತೂರ, ಹಿರಿಯ ವೈದ್ಯ ವಿ.ಬಿ.ನಿಟಾಲಿ ಸೇರಿದಂತೆ ಸದಸ್ಯರು ಸ್ವಾಗತ ಕೋರಿದರು.

ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ಗುರುರಾಯನಗೌಡ, ಸಮೀರ್ ಆಚಾರ್ಯ, ವಿಕಾಸ ಸೊಪ್ಪಿನ ಇದ್ದರು.

ADVERTISEMENT

ಮಾರ್ಚ್ ೭ರಂದು ಪಾದಯಾತ್ರೆ ನರಗುಂದ ತಲುಪಲಿದ್ದು ಅಲ್ಲಿ ಸಮಾವೇಶ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.