ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಸಂಬಂಧ ಮುಖ್ಯ ಕಾರ್ಯದರ್ಶಿ ಮುಂದಿನ ಆದೇಶ ಹೊರಡಿಸುವವರೆಗೆ ಅವರು ಅದೇ ಸ್ಥಳದಲ್ಲಿಮುಂದುವರಿಯಲಿದ್ದಾರೆ.
ವರ್ಗಾವಣೆ ಸಂಬಂಧ ಮುಖ್ಯ ಕಾರ್ಯದರ್ಶಿಯವರಿಗೆ ಇದೇ 26 ರೊಳಗೆ ಮನವಿ ಸಲ್ಲಿಸುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರೋಹಿಣಿ ಸಿಂಧೂರಿಗೆ ಸೂಚಿಸಿದೆ.
ರೋಹಿಣಿ ಮನವಿ ಸಲ್ಲಿಸಿದ ಬಳಿಕ ಮೂರು ದಿನಗಳೊಳಗೆ ವಿಚಾರಣೆ ನಡೆಸಿ, ಸೂಕ್ತ ಆದೇಶ ಹೊರಡಿಸಬಹುದು ಎಂದೂ ಮುಖ್ಯ ಕಾರ್ಯ
ದರ್ಶಿಯವರಿಗೆ ಸೂಚನೆ ನೀಡಿದೆ.
ಅವಧಿಗೂ ಮುನ್ನವೇ ತಮ್ಮನ್ನು ಹಾಸನದಿಂದ ವರ್ಗಾವಣೆ ಮಾಡಿದ ಕ್ರಮವನ್ನು ಪ್ರಶ್ನಿಸಿ ರೋಹಿಣಿ ಸಿಎಟಿ ಮೊರೆ ಹೋಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.