ADVERTISEMENT

ರಾಜ್ಯದ ಭೂಮಿ ದೋಚಿದ ಸಿ.ಎಂ ಇದೀಗ ವಿದೇಶಿ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 20:01 IST
Last Updated 3 ಮಾರ್ಚ್ 2018, 20:01 IST
ರಾಜ್ಯದ ಭೂಮಿ ದೋಚಿದ ಸಿ.ಎಂ ಇದೀಗ ವಿದೇಶಿ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು
ರಾಜ್ಯದ ಭೂಮಿ ದೋಚಿದ ಸಿ.ಎಂ ಇದೀಗ ವಿದೇಶಿ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು   

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ‘ಲೆಕ್ಕಕೊಡಿ’ ಕನ್ನಡಿಗರಿಗೆ, ‘ಲೆಕ್ಕಕೊಡಿ’ ಬೆಂಗಳೂರಿನ ಜನರಿಗೆ ಎಂಬ ಅಭಿಯಾನ ನಡೆಸುತ್ತಿರುವ ಬಿಜೆಪಿ, ಚಾರ್ಜ್ ಶೀಟ್‍ನಲ್ಲಿ ಮಿಝೋರಾಂ ರಸ್ತೆಯ ಚಿತ್ರ ಬಳಸಿಕೊಂಡಿದೆ ಎಂದು ಕಾಂಗ್ರೆಸ್‌ ಟೀಕೆಗೆ ಇದೀಗ ಬಿಜೆಪಿ ತಿರುಗೇಟು ನೀಡಿದೆ.

ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಆರೋಪಿಸಿದ್ದ ಬಿಜೆಪಿ ಮಿಝೋರಾಂನ ರಸ್ತೆಯ ಚಿತ್ರ ಪ್ರಕಟಿಸಿದೆ. ಜೊತೆಗೆ, ಬೆಂಗಳೂರಿನ ಕಸದ ಸಮಸ್ಯೆ ಪ್ರಸ್ತಾಪಿಸಿ ನೇಪಾಳದ ರಾಜಧಾನಿ ಕಾಠ್ಮಂಡುವಿನ ಚಿತ್ರ ಪ್ರಕಟಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT