ADVERTISEMENT

ರಾಣಿ ಚೆನ್ನಮ್ಮ ವಿ.ವಿ: 7 ಗಣ್ಯರಿಗೆ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಬೆಳಗಾವಿ: ವಿವಿಧ ಕ್ಷೇತ್ರಗಳಲ್ಲಿ ಗಣ­ನೀಯ ಸೇವೆ ಸಲ್ಲಿಸಿದ 7 ಮಂದಿ ಗಣ್ಯರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ­ವಿದ್ಯಾ­­ಲಯದ ಸಭಾಭವನದಲ್ಲಿ ಶನಿ­ವಾರ ನಡೆದ ರಾಣಿ ಚನ್ನಮ್ಮ ವಿಶ್ವ­ವಿದ್ಯಾ­­ಲಯದ ಘಟಿಕೋ­ತ್ಸವ­ದಲ್ಲಿ ಗೌರವ ಡಾಕ್ಟ­ರೇಟ್ ಪದವಿ ನೀಡಿ ಗೌರ­ವಿಸ­ಲಾಯಿತು.

ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕುಲ­ಪತಿ ಪ್ರೊ. ಬಿ.ಆರ್‌.ಅನಂತನ್‌ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರ­­ವಿಸಿ­ದರು. ಆರು ಮಂದಿ ಗಣ್ಯರು ಗೌರವ ಡಾಕ್ಟರೇಟ್‌ ಪದವಿ ಪಡೆದರೆ, ಸಾಹಿತಿ ಪ್ರೊ. ಬರಗೂರು ರಾಮ­ಚಂದ್ರಪ್ಪ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್‌ ಪದವಿ ನೀಡಲಾಯಿತು.

ನವದೆಹಲಿಯ ಕೇಂದ್ರ ಲೋಕ­ಸೇವಾ ಆಯೋಗದ ಅಧ್ಯಕ್ಷ ಪ್ರೊ. ಡಿ.­ಪಿ.­ಅಗರವಾಲ್, ಹಿರಿಯ ಪತ್ರ­ಕರ್ತ ಪಾಟೀಲ ಪುಟ್ಟಪ್ಪ, ಸಮಾಜ ಸೇವಕಿ ತೇಜಸ್ವಿನಿ ಅನಂತಕುಮಾರ (ಬೆಂಗ­ಳೂರು), ಹಿರಿಯ ಸ್ವಾತಂತ್ರ್ಯ ಹೋರಾಟ­­­ಗಾರ ಮಹಾದೇವಪ್ಪ ಪಟ್ಟಣ (ರಾಮದುರ್ಗ), ವಿಶ್ರಾಂತ ಕುಲ­­ಪತಿ ಪ್ರೊ. ವಿ.ಟಿ.ಪಾಟೀಲ (ಧಾರ­ವಾಡ) ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಪ್ರೊ. ಎಸ್‌.­ಎಂ.­ಜಾಮದಾರ (ಬೆಳ­ಗಾವಿ) ಅವರಿಗೆ ಗೌರವ ಡಾಕ್ಟ­ರೇಟ್‌ ಪದವಿ ನೀಡಲಾಯಿತು.

ಡಾ. ಪಾಟೀಲ ಪುಟ್ಟಪ್ಪ ಮಾತ­ನಾಡಿ, ‘ದೇಶದಲ್ಲಿ ಓದಿದವರ ಸಂಖ್ಯೆ ಶೇ. 75ರಷ್ಟಿದ್ದರೂ ಅನ್ಯಾ­ಯದ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ. ವಿದ್ಯಾ­­­­ವಂತರು ನ್ಯಾಯಕ್ಕಾಗಿ ಹೋ­ರಾ­­­­­ಡಿ­­ದರೆ ಮಾತ್ರ ದೇಶದ ಅಭಿ­ವೃದ್ಧಿ ಸಾಧ್ಯ’ ಎಂದು  ಹೇಳಿದರು.

ಡಾ. ವಿಷ್ಣುಕಾಂತ ಚಟಪಲ್ಲಿ, ಡಾ. ಎಚ್‌.­ಎಂ.ವಿರೂಪಾಕ್ಷಯ್ಯ, ಡಾ. ಕೆ­ಎನ್‌.­ಗಂಗಾ ನಾಯ್ಕ, ಡಾ. ಎಚ್‌.­ಜಿ.­ದಡ್ಡಿ ಅವರಿಗೆ ಡಿ.­­ಲಿಟ್‌. ಪದವಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.