
ಪ್ರಜಾವಾಣಿ ವಾರ್ತೆ
ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಲಸಿ ಗ್ರಾಮದ ರಾಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಉತ್ಖನನದ ಸಮಯದಲ್ಲಿ ಕದಂಬರ ಕಾಲದ (11ನೇ ಶತಮಾನ) ಏಕಶಿಲೆಯ ನಾಲ್ಕು ಅಡಿ ಎತ್ತರದ ಲಕ್ಷ್ಮೀ ನಾರಾಯಣ ವಿಗ್ರಹವೊಂದು ಭಾನುವಾರ ಪತ್ತೆಯಾಗಿದೆ.
ಭೂವರಾಹ ನರಸಿಂಹ ದೇವಸ್ಥಾನದ ಬಳಿಯಿರುವ ರಾಮೇಶ್ವರ ಮಂದಿರದ ಆವರಣದಲ್ಲಿ ಈ ವಿಗ್ರಹ ದೊರೆತಿದೆ. ಇದನ್ನು ಪರೀಕ್ಷಿಸಿದ ಇತಿಹಾಸ ಸಂಶೋಧಕ ಡಾ.ಬಾಹುಬಲಿ ಹಂದೂರ ಅವರು ‘ಇದು ಕದಂಬರ ಕಾಲದಲದಲ್ಲಿ ಕೆತ್ತಿದ ವಿಗ್ರಹ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.