ADVERTISEMENT

ಲಾರಿ, ಕಾರು ಅಪಘಾತ: ಕ್ಲೀನರ್ ಸಾವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 8:46 IST
Last Updated 2 ಜೂನ್ 2018, 8:46 IST
ಲಾರಿ, ಕಾರು ಅಪಘಾತ: ಕ್ಲೀನರ್ ಸಾವು
ಲಾರಿ, ಕಾರು ಅಪಘಾತ: ಕ್ಲೀನರ್ ಸಾವು   

ಶಿವಮೊಗ್ಗ: ಸಾಗರ ತಾಲ್ಲೂಕಿನ ಮಂಚಾಲೆ ಬಳಿ ಶನಿವಾರ ಕಾರು-ಲಾರಿ‌ ಮಧ್ಯೆ ನಡೆದ ಅಪಘಾತದಲ್ಲಿ ಲಾರಿ ಕ್ಲೀನರ್‌ ಚನ್ನಗಿರಿಯ ಸಲ್ಮಾನ್ (23) ಸಾವಿಗೀಡಾಗಿದ್ದಾರೆ.

ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಆಜಾದ್ ಮಸೀದಿಯ ಮದರಸಾ ಅಧ್ಯಾಪಕರಾದ ಕಲೀಮುಲ್ಲಾ, ಶಫೀವುಲ್ಲಾ, ಗಾಲಿಬ್, ಮಹಮ್ಮದ್ ನಿಯಾಜ್ ಗಾಯಗೊಂಡವರು.

ADVERTISEMENT

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.