ADVERTISEMENT

ವಸತಿ ಬುಕ್ಕಿಂಗ್...

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ರಾಜ್ಯದ ಹಾಲಿ-ಮಾಜಿ ಮುಖ್ಯಮಂತ್ರಿಗಳ ಆಣೆ-ಪ್ರಮಾಣ ಪ್ರಸಂಗವನ್ನು ಖುದ್ದಾಗಿ ನೋಡಲು ಜನ ಆಸಕ್ತಿ ತಳೆದ್ದ್ದಿದಾರೆ.ಏತನ್ಮಧ್ಯೆ ಹಲವು ಶಾಸಕರು, ಸಚಿವರು, ಮಾಜಿ ಸಚಿವರು ಸಹ ಭಾನುವಾರ ಧರ್ಮಸ್ಥಳಕ್ಕೆ ಬರುವುದಾಗಿ ತಿಳಿಸಿದ್ದು, ದೇವಸ್ಥಾನದ ವಸತಿಗೃಹ ಮತ್ತು ಹೋಟೆಲ್‌ಗಳಲ್ಲಿ ಕೊಠಡಿಗಳಿಗೆ ಭಾರೀ ಬೇಡಿಕೆ ಉಂಟಾಗಿದೆ.

ಪ್ರಮುಖ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳ ವರದಿಗಾರರು, ಕ್ಯಾಮೆರಾಮನ್‌ಗಳು ಈ ಅಸಾಮಾನ್ಯ ಸಂದರ್ಭವನ್ನು ~ಸೆರೆ ಹಿಡಿಯಲು~ ಭಾರಿ ಸಂಖ್ಯೆಯಲ್ಲಿ ಆಗಮಿಸಲಿದ್ದು, ಜೂನ್ 26-27ರಂದು ತಂಗಲು ಕೊಠಡಿ ಕಾದಿರಿಸಲು ಅದಾಗಲೇ ತುರುಸಿನ ಯತ್ನ ನಡೆಸಿದ್ದಾರೆ. ಸೋಮವಾರ ಆಣೆ-ಪ್ರಮಾಣ ~ಪ್ರಸಂಗ~ ನಡೆದರೂ-ನಡೆಯದಿದ್ದರೂ ಅದೊಂದು ಐತಿಹಾಸಿಕ ಘಟನೆಯಾಗಿಯೇ ದಾಖಲಾಗಲಿದೆ ಎಂದೇ ಕ್ಷೇತ್ರದಲ್ಲಿ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.