ADVERTISEMENT

ವಿದ್ಯಾರ್ಥಿಗಳಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 5:19 IST
Last Updated 26 ಮಾರ್ಚ್ 2018, 5:19 IST
ವಿದ್ಯಾರ್ಥಿಗಳಿಗೆ ಕಿರಿಕಿರಿ
ವಿದ್ಯಾರ್ಥಿಗಳಿಗೆ ಕಿರಿಕಿರಿ   

ತುಮಕೂರು: ಸಿದ್ಧಗಂಗಾಮಠಕ್ಕೆ ಅಮಿತ್ ಶಾ ಆಗಮಿಸುತ್ತಿರುವುದರಿಂದ ಮಠದ ಆವರಣದಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು ಕಿರಿಕಿರಿ ಅನುಭವಿಸಿದರು.

ಬಿಜೆಪಿ ಕಾರ್ಯಕರ್ತರ ಕೂಗಾಟ, ಮಾಧ್ಯಮದವರ ಗದ್ದಲಕ್ಕೆ ಮಠದ ಸಿಬ್ಬಂದಿ ಮೈಕ್ ನಲ್ಲಿ ಶಾಂತತೆ ಕಾಪಾಡಬೇಕು. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಮನವಿ ಮಾಡುತ್ತಿದ್ದಾರೆ.

ಕೂಗಾಟ ಮಾಡುವವರು 200 ಮೀಟರ್ ಆಚೆ ಹೋಗಿ ಕೂಗಾಡಿ ಎಂದು ಹೇಳಿದಾಗ ಗದ್ದಲ, ಕೂಗಾಟ ಕಡಿಮೆ ಆಯಿತು.

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಿದ್ಧಗಂಗಾಮಠಕ್ಕೆ ನೀಡಲಿರುವ ಭೇಟಿ ಒಂದು ಗಂಟೆ ವಿಳಂಬವಾಗಿದೆ.

9.30ಕ್ಕೆ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ 10.20ಕ್ಕೆ ತಿಪಟೂರಿಗೆ ತೆರಳಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.