ADVERTISEMENT

ಶಿಮುಶ ಪ್ರಶಸ್ತಿ: ವೀರಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2014, 19:30 IST
Last Updated 17 ಫೆಬ್ರುವರಿ 2014, 19:30 IST

ಹಾವೇರಿ: ಚಿತ್ರದುರ್ಗದ  ಮುರುಘಾ ಮಠದ ಶಾಖಾ ಮಠವಾದ ಹಾವೇರಿಯ ಹೊಸ­ಮಠದಿಂದ ನೀಡಲಾಗುವ ಡಾ.ಶಿವಮೂರ್ತಿ ಮುರುಘಾ ಶರಣ (ಡಾ.ಶಿಮುಶ) ಪ್ರಶಸ್ತಿಗೆ ಕ.ವಿ.ವಿ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾ-ಪಕ,  ಸಾಹಿತಿ ಡಾ. ವೀರಣ್ಣ ರಾಜೂರ ಆಯ್ಕೆಯಾಗಿದ್ದಾರೆ.

ಶರಣರ ಸಾಮಾಜಿಕ ಆಂದೋ­ಲನ ಸಂಸ್ಮರಣೆ,  ಮುರುಘಾ ಶರ­ಣರ ಆದರ್ಶ ಅನುಸರಿಸಿ ಹೊಸದಿಕ್ಕು ತೋರುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡ­ಲಾ­ಗುತ್ತದೆ. ಪ್ರಶಸ್ತಿಯು ₨ 50 ಸಾವಿರ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

 ಇದೇ 22 ರಂದು ಹಾವೇರಿಯಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.