ADVERTISEMENT

ಶೃಂಗೇರಿ ಬಳಿ ನಕ್ಸಲ್ ದಾಳಿ, ಬೈಕ್‌ಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಶೃಂಗೇರಿ:  ತಾಲ್ಲೂಕಿನ ಕೆರೆಕಟ್ಟೆ ಸಮೀಪದ ಶೀರ್ಲು ಗ್ರಾಮದ ಕೆಂಪಣ್ಣ ಎಂಬುವವರ ಮನೆಗೆ ಭಾನುವಾರ ರಾತ್ರಿ 9.30 ರ ಸುಮಾರಿಗೆ 8 ಜನರ ನಕ್ಸಲರ ತಂಡ ಭೇಟಿ ನೀಡಿದೆ.

ಈ ಸಂದರ್ಭದಲ್ಲಿ ಕೆಂಪಣ್ಣ ಅವರು ಮನೆಯಲ್ಲಿ ಇರಲಿಲ್ಲ. ಅವರ ಬೈಕ್ ಅನ್ನು ನಕ್ಸಲರು ಸುಟ್ಟು ಪರಾರಿಯಾಗಿದ್ದಾರೆ.

ಕೆಂಪಣ್ಣ ಅವರು ಕೊಪ್ಪದ ಗಿರಿಜನರ ಸಹಕಾರ ಸಂಘ `ಲ್ಯಾಂಪ್ಸ್'ನ ನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.