ADVERTISEMENT

ಸಂಘಟನೆಗಳಿಂದ ವಿನೂತನ ಪ್ರತಿಭಟನೆ

ರೈಲ್ವೆ ಸಚಿವರಿಗೆ ಒಂದು ರೂಪಾಯಿ ಮನಿ ಆರ್ಡರ್‌

​ಪ್ರಜಾವಾಣಿ ವಾರ್ತೆ
Published 3 ಮೇ 2014, 19:30 IST
Last Updated 3 ಮೇ 2014, 19:30 IST
ಚೆನ್ನೈ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಸಾಫ್ಟ್‌ವೇರ್ ಎಂಜಿನಿಯರ್‌ ಸ್ವಾತಿ ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಕ್ರಮವನ್ನು ಖಂಡಿಸಿ ಕೃಷ್ಣರಾಜಪೇಟೆ ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು ಖರ್ಗೆ ಅವರಿಗೆ ತಲಾ ಒಂದು ರೂಪಾಯಿ ಮನಿಯಾರ್ಡರ್‌ ಕಳುಹಿಸುವ ಮೂಲಕ ಪ್ರತಿಭಟಿಸಿದರು
ಚೆನ್ನೈ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಸಾಫ್ಟ್‌ವೇರ್ ಎಂಜಿನಿಯರ್‌ ಸ್ವಾತಿ ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಕ್ರಮವನ್ನು ಖಂಡಿಸಿ ಕೃಷ್ಣರಾಜಪೇಟೆ ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು ಖರ್ಗೆ ಅವರಿಗೆ ತಲಾ ಒಂದು ರೂಪಾಯಿ ಮನಿಯಾರ್ಡರ್‌ ಕಳುಹಿಸುವ ಮೂಲಕ ಪ್ರತಿಭಟಿಸಿದರು   

ಕೃಷ್ಣರಾಜಪೇಟೆ: ಚೆನ್ನೈ ರೈಲ್ವೆ ನಿಲ್ದಾಣ­ದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ಸಾಫ್ಟ್‌ವೇರ್ ಎಂಜಿನಿ­ಯರ್‌ ಸ್ವಾತಿ ಅವರ ಕುಟುಂಬಕ್ಕೆ ಕೇವಲ ಒಂದು ಲಕ್ಷ ರೂಪಾಯಿ ಪರಿ­ಹಾರ ಘೋಷಿಸಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಕ್ರಮ­ವನ್ನು ಖಂಡಿಸಿ, ಅವರಿಗೆ ತಲಾ ಒಂದು ರೂಪಾಯಿ ಮನಿ ಆರ್ಡರ್‌ ಕಳು­ಹಿಸುವ ಮೂಲಕ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶನಿ­ವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರಮುಖ ಅಂಚೆ ಕಚೇರಿ­ಯಲ್ಲಿ ಶನಿವಾರ ಬೆಳಿಗ್ಗೆ ಮನಿ­ಯಾರ್ಡರ್‌ ಮಾಡಿದ ಡಾ.ಕೃಷ್ಣ­ಮೂರ್ತಿ, ಎಚ್.ಬಿ. ಮಂಜುನಾಥ್‌, ಗೌಡರಾಜು, ನಟರಾಜು, ನಾಗ­ರಾಜು, ರಾಮೇಗೌಡ, ವಿಕ್ಕಿ ಮತ್ತಿತ­ರರು ರೈಲ್ವೆ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶೃಂಗೇರಿ ಬಳಿ ಅಕ್ರಮವಾಗಿ ಗೋವು­ಗಳನ್ನು ಸಾಗಿಸುವ ವೇಳೆ ಪೋಲಿಸರ ಗುಂಡಿಗೆ ಬಲಿಯಾದ ಕಬೀರ್‌ ಕುಟುಂಬಕ್ಕೆ ₨10 ಲಕ್ಷ  ಪರಿಹಾರ ನೀಡಿದೆ. ಬಾಂಬ್‌ ಸ್ಫೋಟದ ರೂವಾರಿ ಮದನಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಿದೆ. ಧರ್ಮಾಧಾರಿತವಾಗಿ ಪರಿ­ಹಾರ ಒದಗಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸಾಫ್ಟ್‌ವೇರ್‌ ಎಂಜಿನಿಯರ್ ಸ್ವಾತಿ ಅವರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಮತ್ತು ಗಾಯಾಳು­ಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.