ಸಂವಿಧಾನದ 32ನೇ ವಿಧಿಯಲ್ಲಿ ಸಂವಿಧಾನಾತ್ಮಕ ಪರಿಹಾರಗಳ ಹಕ್ಕಿನ ಕುರಿತು ವಿವರಿಸಲಾಗಿದೆ. (ಈ ಹಿಂದಿನ ಸಂಚಿಕೆಗಳಲ್ಲಿ ತಿಳಿಸಲಾದ) ಮೂಲಭೂತ ಹಕ್ಕುಗಳಲ್ಲಿ ಯಾವುದಾದರೊಂದು ಹಕ್ಕನ್ನು ಯಾರೇ ನಿರಾಕರಿಸಿದರೂ ಆತ/ಆಕೆ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವ ಹಕ್ಕು ಇದೆ. ಕೆಳಹಂತದ ಕೋರ್ಟ್ನಿಂದ ಹಿಡಿದು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ವರೆಗೂ ಹೋಗಲು ಅವಕಾಶ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ನ್ಯಾಯಾಲಯವು ಅಂಥ ಪ್ರಜೆಯನ್ನು ರಕ್ಷಿಸಬೇಕಾಗುತ್ತದೆ. ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಪರಿಶೀಲಿಸುವುದು ನ್ಯಾಯಾಲಯದ ಕರ್ತವ್ಯ ಎಂದು ಈ ವಿಧಿಯಲ್ಲಿ ವಿವರಿಸಲಾಗಿದೆ. ಆದರೆ ಈ ಹಕ್ಕು ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಅನೂರ್ಜಿತಗೊಳ್ಳುತ್ತದೆ. ಹಾಗೆಯೇ ಮಿಲಿಟರಿ ಕಾನೂನು ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಯಾವುದೇ ನ್ಯಾಯಮಂಡಳಿಯಲ್ಲಿ ನಡೆಯುವ ಕೋರ್ಟ್ ಮಾರ್ಷಲ್ಗೆ ಇದು ಅನ್ವಯಿಸುವುದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.