ನಗರದ ಆರ್ಪಿಡಿ ಕಾಲೇಜಿನ ಬಳಿ ಇರುವ ವಿದ್ಯಾರ್ಥಿನಿಲಯ ಆವರಣದಲ್ಲಿ ಶನಿವಾರ ಅವರು ಕೃಷ್ಣ ಮಂದಿರದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.`ಮಾಜಿ ಸಚಿವರು ಸದನದಲ್ಲಿ ಒಂದು ಬಾರಿ ನೋಡಿದ್ದರು. ಆದರೆ ಅದನ್ನು ಮೂರು ದಿನಗಳ ಕಾಲ ಬಿತ್ತರಿಸುವಅಗತ್ಯವಿತ್ತೇ? ಅದರಿಂದ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಮಾಧ್ಯಮಗಳವರು ಚಿಂತಿಸಿದ್ದಾರೆಯೇ~ ಎಂದು ಅವರುಪ್ರಶ್ನಿಸಿದರು.
`ಸುದ್ದಿ ವಾಹಿನಿಗಳು ಅಂದಿನ ಅಶ್ಲೀಲ ದೃಶ್ಯಗಳನ್ನು ಬಿತ್ತರಿಸಿದ್ದನ್ನು ನೋಡಿದರೆ ಮಾಧ್ಯಮದ ಮೇಲೆ ನಿಯಂತ್ರಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ~ ಅಂದು ಅವರು ಅಭಿಪ್ರಾಯಪಟ್ಟರು.ಅಂತಹ ದೃಶ್ಯಗಳನ್ನು ಬಿತ್ತರಿಸುವುದರಿಂದ ಮಕ್ಕಳ ಹಾಗೂ ಯುವಕರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಬಗೆಗೂ ಚಿಂತನೆ ಆಗಬೇಕು~ ಎಂದು ಅವರು ಹೇಳಿದರು.
ಮೊಬೈಲ್ ಮೂಲಕ ಇಂತಹ ದೃಶ್ಯಗಳು ಹರಿದಾಡುವುದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.