ADVERTISEMENT

ಸರ್ವಪಕ್ಷ ಸಭೆಗೂ ಮೊದಲು ಬಂಧಿತರ ಬಿಡುಗಡೆ ಮಾಡಿ

ಸಿಎಂಗೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2016, 11:20 IST
Last Updated 5 ಆಗಸ್ಟ್ 2016, 11:20 IST
ಸರ್ವಪಕ್ಷ ಸಭೆಗೂ ಮೊದಲು ಬಂಧಿತರ ಬಿಡುಗಡೆ ಮಾಡಿ
ಸರ್ವಪಕ್ಷ ಸಭೆಗೂ ಮೊದಲು ಬಂಧಿತರ ಬಿಡುಗಡೆ ಮಾಡಿ   

ಶಿರಸಿ: ಮಹಾದಾಯಿ ವಿಷಯ ಸಂಬಂಧ ಮುಖ್ಯಮಂತ್ರಿ ಅವರು ಇದೇ 7ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಸಭೆ ನಡೆಸುವ ಮೊದಲು ಅಮಾಯಕರ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು. ಬಂಧನದಲ್ಲಿರುವವರನ್ನು ಕರಾರುರಹಿತವಾಗಿ ಬಿಡುಗಡೆಗೊಳಿಸಬೇಕು ಎಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ಇಲ್ಲಿಗೆ ಆಗಮಿಸಿದ್ದ ಶೆಟ್ಟರ್, ಸುದ್ದಿಗಾರರ ಜತೆ ಮಾತನಾಡಿ, ಮಹಾದಾಯಿ ಹೋರಾಟದ ವೇಳೆ ಬಂಧಿಸಲಾಗಿರುವ ರೈತರು ಹಾಗೂ ಅಮಾಯಕರನ್ನು ಸಭೆ ನಡೆಸುವ ಮುನ್ನ ಬಿಡುಗಡೆ ಮಾಡಬೇಕು. ಜತೆಗೆ, ಅವರ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಯಾವ ಪುರುಷಾರ್ಥಕ್ಕಾಗಿ ಸರ್ವ ಪಕ್ಷದ ಸಭೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.