ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಪೊಲೀಸ್ ಅಧಿಕಾರಿ ಯಶೋದಾ ವಂಟಗೋಡಿ, ಕೈಗಾರಿಕೋದ್ಯಮಿ ಕಾಡಪ್ಪ ಮೈಸೂರು, ಅಂಕಣಕಾರ ಎ.ಆರ್. ಮಣಿಕಾಂತ್, ಹಾಸನದ ಅಂಗವಿಕಲ ಕ್ರೀಡಾಪಟು ಗಿರೀಶ್ ನಾಗರಾಜೇ ಗೌಡ, ರಾಯಚೂರಿನ ಸಾಫ್ಟ್ವೇರ್ ಎಂಜಿನಿಯರ್ ರಮೇಶ ಬಲ್ಲಿದ್, ಇಥಿಯೋಪಿಯಾದಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಿದ್ದ ಧಾರವಾಡದ ಸುಜಾತಾ ಆನಿಶೆಟ್ಟರ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 8 ಚಿನ್ನದ ಪದಕ ಪಡೆದ ನಂಜನಗೂಡಿನ ಎಂ. ಅಕ್ಷತಾ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಧಾರವಾಡದ ಮಂಜುಳಾ ಮುನವಳ್ಳಿ, ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಕಾರವಾರದ ನಿವೇದಿತಾ ಸಾವಂತ್ ಅವರಿಗೆ ಅವ್ವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ, ರಾಘವೇಶ್ವರ ಭಾರತಿ ಸ್ವಾಮೀಜಿ, ಕಿರುತೆರೆ ನಟಿ ಜಯಲಕ್ಷ್ಮಿ ಪಾಟೀಲ ಮಾತನಾಡಿದರು. ಬಸವರಾಜ ಹೊರಟ್ಟಿಯವರ ತಾಯಿ ಗುರವ್ವ ಹೊರಟ್ಟಿಯವರ ಸ್ಮರಣಾರ್ಥ ‘ಅವ್ವ ಸೇವಾ ಟ್ರಸ್ಟ್’ನಿಂದ ಈ ಪ್ರಶಸ್ತಿ ನೀಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.