ಹಾಸನ: ಕನ್ನಡ ನುಡಿ ಜಾತ್ರೆಗೆ ಸಿಂಗಾರಗೊಂಡಿರುವ ಶ್ರವಣ ಬೆಳಗೊಳದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಶನಿವಾರ ಸಂಜೆ ಕನ್ನಡ ಅಭಿಮಾನಿಗಳು, ಕಲಾ ತಂಡಗಳ ಸಮಾಗಮದೊಂದಿಗೆ ಸಂಭ್ರಮದಿಂದ ನೆರವೇರಿತು.
ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಅಧ್ಯಕ್ಷರು ಕುಳಿತ ಗಾಡಿಯ ನೊಗಕ್ಕೆ ಹೆಗಲುಕೊಟ್ಟ ಉತ್ತೇನಹಳ್ಳಿಯ ಚಂದ್ರಣ್ಣ ಅವರ ಎತ್ತುಗಳು ಗಂಭೀರ ಹೆಜ್ಜೆ ಹಾಕಿ ಮುಂದೆ ಸಾಗಿದವು.
ಹೂಗಳಿಂದ ಸಿಂಗಾರಗೊಂಡಿದ್ದ ಗಾಡಿಯ ಮೇಲಿನ ವೇದಿಕೆಯಲ್ಲಿ ಡಾ.ಸಿದ್ದಲಿಂಗಯ್ಯ ಹಾಗೂ ಅವರ ಪತ್ನಿ ರಮಾ ಅವರು ಆಸೀನರಾಗಿದ್ದರು.
ಮೆರವಣಿಯಲ್ಲಿ ವೀರಗಾಸೆ, ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ನೀಡಿದ್ದವು. ಕನ್ನಡದ ಬಾವುಟ ರಾರಾಜಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.