ADVERTISEMENT

ಸಿಂಹ ವಿರುದ್ಧ ಪ್ರಕಾಶ್‌ ರೈ ಮಾನನಷ್ಟ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 19:30 IST
Last Updated 27 ಫೆಬ್ರುವರಿ 2018, 19:30 IST
ಸಿಂಹ ವಿರುದ್ಧ ಪ್ರಕಾಶ್‌ ರೈ ಮಾನನಷ್ಟ ಮೊಕದ್ದಮೆ
ಸಿಂಹ ವಿರುದ್ಧ ಪ್ರಕಾಶ್‌ ರೈ ಮಾನನಷ್ಟ ಮೊಕದ್ದಮೆ   

ಮೈಸೂರು: ಸಂಸದ ಪ್ರತಾಪ ಸಿಂಹ ವಿರುದ್ಧ ನಟ ಪ್ರಕಾಶ್‌ ರೈ ಅವರು ಮೈಸೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ₹ 1 ಪರಿಹಾರ ಕೊಡಿಸುವಂತೆ ಕೋರಿ ಮಂಗಳವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

ವಕೀಲ ಎಂ.ಮಹದೇವಸ್ವಾಮಿ ಅವರ ಮೂಲಕ ಅರ್ಜಿ ಸಲ್ಲಿಸಿದರು. ಐಪಿಸಿ ಸೆಕ್ಷನ್ 499, 500 ಅಡಿಯಲ್ಲಿ ಮಾನನಷ್ಟ ಹಾಗೂ 503ರ ಅಡಿಯಲ್ಲಿ ಜೀವ ಬೆದರಿಕೆ ಮೊಕದ್ದಮೆ ದಾಖಲಾಗಿದೆ. ದೂರು ಸ್ವೀಕರಿಸಿರುವ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 3ಕ್ಕೆ ನಿಗದಿಪಡಿಸಿದೆ.

‘ಸಂಸದ ಪ್ರತಾಪ ಸಿಂಹ ಅವರು ನನ್ನ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದರು. ಇದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಯಬಿಟ್ಟಿದ್ದರು. ಇದರಿಂದ ನನಗೆ ಮಾನಹಾನಿಯಾಗಿದೆ. ಈ ಕುರಿತು ನಾನು ಎರಡು ಬಾರಿ ನೋಟಿಸ್‌ ನೀಡಿದ್ದರೂ ಸ್ವೀಕರಿಸಿರಲಿಲ್ಲ. ಮೂರನೇ ಬಾರಿ ಸ್ವೀಕರಿಸಿದ್ದಾರೆ’ ಎಂದು ರೈ ಪ್ರತಿಕ್ರಿಯಿಸಿದರು.

ADVERTISEMENT

‘ಪ್ರಕರಣ ಈಗ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ₹ 1 ಪರಿಹಾರ ಸಾಕು’ ಎಂದರು.

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರೂ ಇದೇ ರೀತಿ ನಿಂದಿಸಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಕುರಿತೂ ಯೋಚಿಸಲಾಗುವುದು’ ಎಂದು ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.