ಔರಂಗಾಬಾದ್ (ಬಿಹಾರ) (ಪಿಟಿಐ): ಮಗನ ಬಗ್ಗೆ ದೇವರು ದಯೆ ತೋರುತ್ತಾನೆ ಎಂಬ ನಂಬಿಕೆ ಇರಿಸಿಕೊಂಡಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ನ ಕುಟುಂಬವು ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಟಿ.ವಿ ಸುದ್ದಿವಾಹಿನಿಗಳಿಂದ ಕಣ್ಣು, ಕಿವಿ ಕೀಳಲಿಲ್ಲ.
ಮಂಗಳವಾರ ರಾತ್ರಿಯಿಂದ ಆಹಾರ ಸೇವಿಸದ ಕುಟುಂಬ ಸದಸ್ಯರು ಬುಧವಾರ ಸಂಜೆವರೆಗೂ ಏನೂ ತಿಂದಿರಲಿಲ್ಲ. ಶುಕ್ರವಾರ ಶಿಕ್ಷೆ ಪ್ರಕಟಣೆ ಆಗುತ್ತದೆ ಎಂಬ ವಿಷಯ ತಿಳಿದ ಮೇಲೆ ಕುಟುಂಬ ಸದಸ್ಯರು ತಾತ್ಕಾಲಿಕವಾದರೂ ಕೊಂಚ ನಿರಾಳರಾದರು ಎಂದು ಕುಟುಂಬದ ಆಪ್ತರು ಹೇಳಿದ್ದಾರೆ.
ಕುಟುಂಬ ಸದಸ್ಯರು ಮಾಧ್ಯಮದವರೊಂದಿಗೆ ಮಾತನಾಡಲು ಮನೆಯಿಂದ ಹೊರಗೆ ಬರಲಿಲ್ಲ. ಅಕ್ಷಯ್ ಎಸಗಿರುವ ನೀಚ ಕೃತ್ಯದ ಬಗ್ಗೆ ಗ್ರಾಮಸ್ಥರಲ್ಲಿ ಆಕ್ರೋಶವಿದ್ದರೂ, ಆತನ ಮುಗ್ಧ ಹೆಂಡತಿ ಮತ್ತು 2 ವರ್ಷದ ಗುಂಡು ಮಗುವಿನ ಬಗ್ಗೆ ಕನಿಕರ ಪಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.