ADVERTISEMENT

ಹಣಕ್ಕಾಗಿ ಬೆದರಿಕೆ: ಬಂಧನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 18:59 IST
Last Updated 12 ಜೂನ್ 2018, 18:59 IST

ಕೊಪ್ಪಳ: ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಹಣ ನೀಡುವಂತೆ ಪತ್ರ ಕಳಿಸಿ ಹಾಗೂ ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕಿದ್ದ ನಾಲ್ವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಇಶಾಕ್ ಎಂ. ಜಯರಾಜ್, ಎರ್ರಿಸ್ವಾಮಿ ಬಿಲಗಾರ, ಮಹ್ಮಮದ್ ನಾದಿಕ್, ಮಹಮ್ಮದ್ ಫಾರೂಕ್ ಬಂಧಿತರು. ಮಧು ಬಿ.ಪಿ ಮತ್ತು ನಾಗರಾಜ ತಿಪ್ಪನಗೌಡರ ಎಂಬುವರನ್ನು ಬೆದರಿಸಿ ಪತ್ರವನ್ನು ಶಾಸಕರ ಮನೆಗೆ ತಲುಪಿಸುವಂತೆ ಒತ್ತಡ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪತ್ರದಲ್ಲಿ ಶಾಸಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ₹500 ಮುಖಬೆಲೆಯ 4 ಖೋಟಾ ನೋಟು ಇಟ್ಟಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.