ಗೋಣಿಕೊಪ್ಪಲು: ಕಳೆದೆರಡು ದಿನಗಳಲ್ಲಿ ಎರಡು ಹಸುಗಳನ್ನು ಕೊಂದಿದ್ದ ಹುಲಿ ತಿತಿಮತಿ ಸಮೀಪದ ಭದ್ರಗೋಳ ಗ್ರಾಮದ ಅಬ್ಬೂರು ತಾರಿಕಟ್ಟೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ರಾತ್ರಿ 10.10ರ ಸುಮಾರಿಗೆ ಬಿದ್ದಿದೆ."
ಅರಣ್ಯ ಇಲಾಖೆ ಸಿಬ್ಬಂದಿ ಸಂಜೆ 6 ಗಂಟೆ ಹೊತ್ತಿಗೆ ಬೋನನ್ನು ಇಟ್ಟಿದ್ದರು. ಅಲ್ಲದೆ, ಹುಲಿ ಅರ್ಧ ತಿಂದಿದ್ದ ಹಸುವಿನ ಮಾಂಸವನ್ನು ನೇತು ಹಾಕಿದ್ದರು. ಹುಲಿ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.