ADVERTISEMENT

‘ರಾವಣ ರಾಜ್ಯ ಬಾರದಂತೆ ನೋಡಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST
ಜನವಾದಿ ಮಹಿಳಾ ಸಂಘಟನೆಯ 8ನೇ ರಾಜ್ಯ ಸಮ್ಮೇಳನವನ್ನುಬೃಂದಾ ಕಾರಟ್‌್ ಶನಿವಾರ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷೆ ನೀಲಾ ಕೆ, ಕೆ.ಎಸ್. ವಿಮಲಾ, ಎಸ್‌್್. ವರಲಕ್ಷ್ಮೀ ಇದ್ದಾರೆ.
ಜನವಾದಿ ಮಹಿಳಾ ಸಂಘಟನೆಯ 8ನೇ ರಾಜ್ಯ ಸಮ್ಮೇಳನವನ್ನುಬೃಂದಾ ಕಾರಟ್‌್ ಶನಿವಾರ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷೆ ನೀಲಾ ಕೆ, ಕೆ.ಎಸ್. ವಿಮಲಾ, ಎಸ್‌್್. ವರಲಕ್ಷ್ಮೀ ಇದ್ದಾರೆ.   

ಮಂಡ್ಯ: ‘ಕೇಂದ್ರದಲ್ಲಿ ಭಿನ್ನ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ಎಂಬ ರಾವಣ ಬರುತ್ತಿದ್ದಾನೆ. ಜನರು ಎಚ್ಚರದಿಂದ ತಮ್ಮ ಹಕ್ಕು ಚಲಾಯಿಸಬೇಕು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಹಿರಿಯ ನಾಯಕಿ, ರಾಜ್ಯಸಭೆ ಮಾಜಿ ಸದಸ್ಯೆ ಬೃಂದಾ ಕಾರಟ್‌ ಹೇಳಿದರು.

ಜಿಲ್ಲೆಯ ಕೆ.ಎಂ. ದೊಡ್ಡಿಯಲ್ಲಿ ಶನಿವಾರ ಆರಂಭವಾದ ಮೂರು ದಿನಗಳ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 8ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ರಾವಣನಿಗೆ ಹತ್ತು ತಲೆಗಳಿರುತ್ತವೆ. ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌, ವಿಎಚ್‌ಪಿ, ಭಜರಂಗ ದಳ ಸೇರಿದಂತೆ ಹತ್ತು ತಲೆಗಳು ಬರುತ್ತಿವೆ. ರಾಮ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡು  ತ್ತಿದ್ದಾರೆ. ಅದರ ಪರಿಣಾಮವನ್ನು ಮುಜಾಫ ರ್‌ನಗರದಲ್ಲಿ ಎದುರಿಸು ತ್ತಿದ್ದೇವೆ’ ಎಂದು ಎಚ್ಚರಿಸಿದರು.

‘ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಧಾ ಸುಂದರ್‌ ರಾಮನ್‌, ರಾಜ್ಯ ಉಪಾಧ್ಯಕ್ಷೆ ನೀಲಾ ಕೆ., ಕೆ.ಎಸ್‌. ವಿಮಲಾ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಸ್‌. ವರಲಕ್ಷ್ಮೀ, ರಾಜ್ಯ ಘಟಕದ ಅಧ್ಯಕ್ಷೆ ಗೌ ರಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.