ಬೆಂಗಳೂರು: ಬೆಳಗಾವಿ, ಚಿಕ್ಕಬಳ್ಳಾಪುರ, ಧಾರವಾಡ, ಹಾಸನ ಮತ್ತು ಬಾಗಲಕೋಟೆ ಜಿಲ್ಲೆಗಳ ಎಸ್ಪಿಗಳು ಹಾಗೂ ಬೆಂಗಳೂರು ನಗರದ ನಾಲ್ವರು ಡಿಸಿಪಿಗಳು ಸೇರಿದಂತೆ 18 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ.
ವರ್ಗಾವಣೆ ವಿವರ: ಶ್ರೀನಾಥ್ ಜೋಶಿ– ಎಸ್ಪಿ, ಲೋಕಾಯುಕ್ತ; ಕೆ.ಎಂ. ಶಾಂತರಾಜು– ಎಸ್ಪಿ, ಬೆಸ್ಕಾಂ; ಸಿ.ಕೆ. ಬಾಬಾ– ಡಿಸಿಪಿ, ಬೆಂಗಳೂರು ಆಗ್ನೇಯ; ಸಂಜೀವ್ ಎಂ. ಪಾಟೀಲ– ಎಸ್ಪಿ, ಬೆಳಗಾವಿ; ಕಲಾ ಕೃಷ್ಣಸ್ವಾಮಿ– ಡಿಸಿಪಿ, ಬೆಂಗಳೂರು ಪೂರ್ವ ಸಂಚಾರ ವಿಭಾಗ; ಹರೀಶ್ ಪಾಂಡೆ– ಎಸ್ಪಿ; ಭ್ರಷ್ಟಾಚಾರ ನಿಗ್ರಹ ದಳ; ಲಕ್ಷ್ಮಣ ನಿಂಬರಗಿ– ಡಿಸಿಪಿ, ಬೆಂಗಳೂರು ಪಶ್ಚಿಮ; ನಾಗೇಶ್ ಡಿ.ಎಲ್.– ಎಸ್ಪಿ, ಚಿಕ್ಕಬಳ್ಳಾಪುರ, ಲೋಕೇಶ್ ಬಿ. ಜಗಲಾಸರ್– ಎಸ್ಪಿ, ಧಾರವಾಡ.
ಆರ್. ಶ್ರೀನಿವಾಸ ಗೌಡ– ಡಿಸಿಪಿ, ಬೆಂಗಳೂರು ಕೇಂದ್ರ; ಜಿ.ಕೆ. ಮಿಥುನ್ ಕುಮಾರ್– ಎಸ್ಪಿ, ಸಿಐಡಿ; ಪಿ. ಕೃಷ್ಣಕಾಂತ್– ಡಿಸಿಪಿ, ಬೆಂಗಳೂರು ದಕ್ಷಿಣ; ಹರಿರಾಂ ಶಂಕರ್– ಎಸ್ಪಿ, ಹಾಸನ; ಜಯಪ್ರಕಾಶ್– ಎಸ್ಪಿ, ಬಾಗಲಕೋಟೆ; ಶೋಭಾ ರಾಣಿ ವಿ.ಜೆ.– ಎಸ್ಪಿ, ಎಸಿಬಿ; ಶಿವಾಂಶು ರಜಪೂತ್– ಸಹಾಯಕ ಎಸ್ಪಿ, ಹುಮ್ನಾಬಾದ್ ಉಪ ವಿಭಾಗ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.