ADVERTISEMENT

ಪಲಿಮಾರು ಶ್ರೀ ಪುರ ಪ್ರವೇಶ ಇಂದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:45 IST
Last Updated 2 ಜನವರಿ 2018, 19:45 IST
ಪಲಿಮಾರು ಶ್ರೀ ಪುರ ಪ್ರವೇಶ ಇಂದು
ಪಲಿಮಾರು ಶ್ರೀ ಪುರ ಪ್ರವೇಶ ಇಂದು   

ಉಡುಪಿ: ಇದೇ 18ರಂದು ಪರ್ಯಾಯ ಪೀಠ ಏರಲಿರುವ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಬುಧವಾರ ಸಂಜೆ ಉಡುಪಿ ಪುರ ಪ್ರವೇಶ ಮಾಡಲಿದ್ದಾರೆ.

ಪರ್ಯಾಯ ಪೂರ್ವಭಾವಿ ತೀರ್ಥಕ್ಷೇತ್ರಯಾತ್ರೆಯಲ್ಲಿರುವ ಸ್ವಾಮೀಜಿ ಅವರು ಸರ್ವಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಅದಮಾರಿನಿಂದ ಉಡುಪಿಗೆ ಬರುವರು. ಸುಮಾರು 200 ಬೈಕ್, ಇತರ ವಾಹನಗಳಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.

ಮಧ್ಯಾಹ್ನ 3.30ರ ಸುಮಾರಿಗೆ ಅವರು ನಗರದ ಜೋಡುಗಟ್ಟೆ ತಲುಪುವರು. ಸ್ವಾಮೀಜಿ ಅವರಿಗೆ ಸ್ವಾಗತ ಕೋರಿ ಅಲ್ಲಿಂದ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.

ADVERTISEMENT

ಮಾಲಾರ್ಪಣೆ ಮಾಡಲು ಅವಕಾಶ

ಅದಮಾರಿನಿಂದ ಮೆರವಣಿಗೆ ಮೂಲಕ ಆಗಮಿಸುವ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರಿಗೆ ಮಾಲಾರ್ಪಣೆ ಮಾಡಲು ಹಾಗೂ ಗೌರವಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಎರ್ಮಾಳು, ಉಚ್ಚಿಲ, ಪಾಂಗಳ, ಕಾಪು, ಕಟಪಾಡಿ, ಉದ್ಯಾವರದಲ್ಲಿ ಭಕ್ತರು ಸ್ವಾಮೀಜಿ ಅವರನ್ನು ಗೌರವಿಸಬಹುದು. ಮಧ್ಯಾಹ್ನ 2 ಗಂಟೆಗೆ ಸ್ವಾಮೀಜಿ ಅವರು ಅದಮಾರಿನಿಂದ ಹೊರಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.