ADVERTISEMENT

ಶವದ ಮೇಲೆ ರಾಜಕಾರಣ ಮಾಡುವವರನ್ನು ತಿರಸ್ಕರಿಸಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 9:42 IST
Last Updated 7 ಜನವರಿ 2018, 9:42 IST
ಶವದ ಮೇಲೆ ರಾಜಕಾರಣ ಮಾಡುವವರನ್ನು ತಿರಸ್ಕರಿಸಿ: ಸಿದ್ದರಾಮಯ್ಯ
ಶವದ ಮೇಲೆ ರಾಜಕಾರಣ ಮಾಡುವವರನ್ನು ತಿರಸ್ಕರಿಸಿ: ಸಿದ್ದರಾಮಯ್ಯ   

ಬೆಳ್ತಂಗಡಿ: ‘ಎಲ್ಲರ ಜೀವಕ್ಕೂ ಬೆಲೆ ಇದೆ. ಜಾತಿ, ಧರ್ಮಗಳ ಆಧಾರದಲ್ಲಿ ವಿಂಗಡಣೆ ಬೇಡ. ಕೆಲವರು ಶವ ಮುಂದಿಟ್ಟುಕೊಂಡ ರಾಜಕಾರಣ ಮಾಡುತ್ತಿದ್ದಾರೆ, ಅಂಥದ್ದು ಕೊನೆಗೊಳ್ಳಬೇಕು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶವದ ಮೇಲೆ ರಾಜಕಾರಣ ಮಾಡುವವರನ್ನು ತಿರಸ್ಕರಿಸಿ. ಸಂಘಟಿತ ಅಪರಾಧ ಮತ್ತು ಗೂಂಡಾಗಿರಿಯನ್ನು ಯಾವುದೇ ಧರ್ಮ, ಜಾತಿಯವರು ಮಾಡಿದರೂ ತಿರಸ್ಕರಿಸಬೇಕು.

ADVERTISEMENT

ಬಿಜೆಪಿ ಅವರು ತೋಳ ಕುರಿ ಕಥೆಯಂತೆ ಆಟ ಆಡುತ್ತಿದ್ದಾರೆ. ಅವರೇ ಬೆಂಕಿ ಹಾಕಿ ರಮಾನಾಥ್‌ ರೈ ವಿರುದ್ದ ಆರೋಪ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.