ADVERTISEMENT

ಕಾರು ಅಪಘಾತ: ಮಾನವೀಯತೆ ಮರೆತ ಸಚಿವ ಅನಂತ ಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 15:03 IST
Last Updated 28 ಜನವರಿ 2018, 15:03 IST
ಅನಂತ ಕುಮಾರ ಹೆಗಡೆ
ಅನಂತ ಕುಮಾರ ಹೆಗಡೆ   

ದೇವನಹಳ್ಳಿ: ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರ ಬೆಂಗಾವಲು ಕಾರು ಶನಿವಾರ ದೇವನಹಳ್ಳಿಯ ಸಾವಕನ ಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿದೆ.

ಸಚಿವರ ಬೆಂಗಾವಲು ಕಾರು ಬೈಕ್ ಮತ್ತು ಇನ್ನೋವಾ ಕಾರಿಗೆ ಗುದ್ದಿದ್ದು, ಅಪಘಾತ ಸಂಭವಿಸಿದರೂ ಸಚಿವರು ಕಾರು ನಿಲ್ಲಿಸಲಿಲ್ಲ.
ಬೈಕ್ ಸವಾರ ಮತ್ತು ಇನ್ನೋವಾ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.

ಅಪಘಾತ ಸಂಭವಿಸಿದರೂ ಮಾನವೀಯತೆ ಮರೆತು ಅಲ್ಲಿಂದ ಹೊರಟು ಹೋದ ಸಚಿವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.