ADVERTISEMENT

‘ಕೆಲಸ ಮಾಡದ ಆಯುಷ್‌ ಸಚಿವಾಲಯ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
‘ಕೆಲಸ ಮಾಡದ ಆಯುಷ್‌ ಸಚಿವಾಲಯ’
‘ಕೆಲಸ ಮಾಡದ ಆಯುಷ್‌ ಸಚಿವಾಲಯ’   

ಬಳ್ಳಾರಿ: ‘ಯೋಗದ ಮಹತ್ವವನ್ನು ದೇಶದಾದ್ಯಂತ ಸಾರಬೇಕಾದ ಕೇಂದ್ರದ ಆಯುಷ್‌ ಸಚಿವಾಲಯ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ’ ಎಂದು ಯೋಗ ಗುರು ಬಾಬಾ ರಾಮದೇವ್‌ ಶನಿವಾರ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವಾಲಯದ ಅಧಿಕಾರಿಗಳು ಸುಮ್ಮನೇ ಕುಳಿತುಕೊಳ್ಳುವುದಾದರೆ ಅಂಥ ಸಚಿವಾಲಯ ಇರಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ‘ಪ್ರಧಾನಿ ಮೋದಿ ಬಯಸಿದರೆ ಪತಂಜಲಿ ಯೋಗ ಸಮಿತಿಯು ಸಚಿವಾಲಯಕ್ಕೆ ಉಚಿತವಾಗಿ ಸಲಹೆ, ಮಾರ್ಗದರ್ಶನ ನೀಡುತ್ತದೆ. ಆ ಮೂಲಕವಾದರೂ ಯೋಗವನ್ನು ಜನಪ್ರಿಯಗೊಳಿಸುವ ಆಂದೋಲನವನ್ನು ಗಟ್ಟಿಗೊಳಿಸಬಹುದು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT