ADVERTISEMENT

ದನದ ಕೊಟ್ಚಿಗೆ ಹೊಕ್ಕ ಚಿರತೆ ಸೆರೆ

ರಾಮನಗರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 5:19 IST
Last Updated 5 ಫೆಬ್ರುವರಿ 2018, 5:19 IST
ದನದ ಕೊಟ್ಚಿಗೆ ಹೊಕ್ಕ ಚಿರತೆ ಸೆರೆ
ದನದ ಕೊಟ್ಚಿಗೆ ಹೊಕ್ಕ ಚಿರತೆ ಸೆರೆ   

ರಾಮನಗರ: ಇಲ್ಲಿನ ಸಂಗನಬಸವನದೊಡ್ಡಿ ಗ್ರಾಮದ ಮನೆಯೊಂದರ ದನದ ಕೊಟ್ಟಿಗೆ ಹೊಕ್ಕಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೋಮವಾರ ನಸುಕಿನಲ್ಲಿ ಸೆರೆ ಹಿಡಿದಿದ್ದಾರೆ.

ಮನೆಯಲ್ಲಿನ ಸಾಕು ನಾಯಿಯನ್ನು ಹಿಡಿಯುವ ಸಲುವಾಗಿ ಮುಂಜಾನೆ ಮೂರು ಗಂಟೆಯ ಸುಮಾರಿಗೆ ಚಿರತೆಯು ದನದ ಕೊಟ್ಟಿಗೆ ಸೇರಿತು‌. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.