ADVERTISEMENT

ಬಾಗಲಕೋಟೆ: ಕಾರು– ಡಿಸ್ಕವರಿ ಬೈಕ್ ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:35 IST
Last Updated 10 ಫೆಬ್ರುವರಿ 2018, 9:35 IST
ಬಾಗಲಕೋಟೆ: ಕಾರು– ಡಿಸ್ಕವರಿ ಬೈಕ್  ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಬಾಗಲಕೋಟೆ: ಕಾರು– ಡಿಸ್ಕವರಿ ಬೈಕ್ ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು   

ಬಾಗಲಕೋಟೆ: ಇಲ್ಲಿನ ಸೀಗಿಕೇರಿ ಕ್ರಾಸ್ ಬಳಿ ಹುಂಡೈ ಕಾರು ಹಾಗೂ ಡಿಸ್ಕವರಿ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಮೃತರನ್ನು ಬೇವಿನಮಟ್ಟಿ ಗ್ರಾಮದ ನಿಂಗಪ್ಪ ಮಲ್ಲಾಡದ (26), ಬಾಗವ್ವ ಸೊನ್ನದ (55) ಎಂದು ಗುರುತಿಸಲಾಗಿದೆ. ನಿಂಗಪ್ಪ ಮಲ್ಲಾಡದ ಅವರು ಬಾಗಲಕೋಟೆಯ ಸಂಗೊಳ್ಳಿರಾಯಣ್ಣ ಯುವಘರ್ಜನೆ ಸಂಘಟನೆಯ ಅಧ್ಯಕ್ಷ.

ಅಪಘಾತಕ್ಕೀಡಾದ ಹುಂಡೈ ಕಾರು ನವನಗರ ನಿವಾಸಿ ಶ್ರೀನಿವಾಸ್ ಕುಲಕರ್ಣಿ ಎಂಬುವರಿಗೆ ಸೇರಿದೆ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.