ಹೊಸಪೇಟೆ(ಬಳ್ಳಾರಿ ಜಿಲ್ಲೆ): ಕಾಂಗ್ರೆಸ್ನ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಠ, ದೇವಸ್ಥಾನಗಳ ಭೇಟಿ ಮುಂದುವರಿದಿದ್ದು, ರಾಜ್ಯಕ್ಕೆ ಬಂದಿರುವ ಅವರು ಕೊಪ್ಪಳದ ಹುಲಿಗೆಮ್ಮ ದೇಗುಲಕ್ಕೆ ಭೇಟಿ ನೀಡಿದರು.
ಇಲ್ಲಿ ಶನಿವಾರ ನಡೆದ ಕಾಂಗ್ರೆಸ್ನ ‘ಜನಾರ್ಶೀವಾದ ಸಮಾವೇಶ’ದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರು ಕಾರ್ಯಕ್ರಮದ ಬಳಿಕ ಹುಲಿಗೆಮ್ಮ ದೇವಸ್ಥಾನಕ್ಕೆ ಬೇಟಿ ನೀಡಿದರು.
ದೇಗುಲದಲ್ಲಿ ಕೈ ಮುಗಿದು ನಮಿಸಿದ ರಾಹುಲ್ ಅವರಿಗೆ ದೇಗುಲ ಅರ್ಚಕರು ಹಣೆಗೆ ತಿಲಕ ಹಚ್ಚಿರುವುದು ವಿಡಿಯೊದಲ್ಲಿದೆ. ಅರ್ಚಕರು ಜತೆಗಿದ್ದ ಮುಖಂಡರಿಗೂ ತಿಲಕ ಹಚ್ಚಿದ್ದಾರೆ,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.