ADVERTISEMENT

ಲಾರಿಗಳ ಮಧ್ಯೆ ಸಿಲುಕಿದ ಕಾರು: ಅಣ್ಣ–ತಂಗಿ ಸಾವು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 20:06 IST
Last Updated 5 ಫೆಬ್ರುವರಿ 2021, 20:06 IST
ಹಟ್ಟಿ ಸಮೀಪ ಗೋಲಪಲ್ಲಿ ಬಳಿ ಶುಕ್ರವಾರ ಎರಡು ಲಾರಿಗಳ ಡಿಕ್ಕಿಯಿಂದ ಕಾರು ನಜ್ಜುಗುಜ್ಜಾಗಿರುವುದು
ಹಟ್ಟಿ ಸಮೀಪ ಗೋಲಪಲ್ಲಿ ಬಳಿ ಶುಕ್ರವಾರ ಎರಡು ಲಾರಿಗಳ ಡಿಕ್ಕಿಯಿಂದ ಕಾರು ನಜ್ಜುಗುಜ್ಜಾಗಿರುವುದು   

ಹಟ್ಟಿ ಚಿನ್ನದಗಣಿ (ರಾಯಚೂರು ಜಿಲ್ಲೆ): ಲಿಂಗಸುಗೂರು ತಾಲ್ಲೂಕಿನ ಗೋಲಪಲ್ಲಿ ಬಳಿ ಶ್ರೀರಂಗಪಟ್ಟಣ–ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ಮಧ್ಯೆ ಕಾರು ಸಿಕ್ಕಿಕೊಂಡು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಅಣ್ಣ–ತಂಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರ ತಂದೆ–ತಾಯಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಕೋಳೂರ ಗ್ರಾಮದ ಹರ್ಷಿತಾ (16), ಭುವನ್‌ (17) ಅವರ ದೇಹಗಳು ಅಪಘಾತದ ರಭಸಕ್ಕೆ ಛಿದ್ರಗೊಂಡಿದ್ದವು.

ಹರ್ಷಿತಾ ಮತ್ತು ಭುವನ್‌ ದಾವಣಗೆರೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರನ್ನುಬಿಟ್ಟುಬರಲು ಪಾಲಕರು ಕಾರಿನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು.

ADVERTISEMENT

ಮತ್ತೊಂದು ಅಪಘಾತ: ಈ ಅಪಘಾತ ಸ್ಥಳದ ಸನಿಹವೇವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಅವರು ಪ್ರಯಾಣಿಸುತ್ತಿದ್ದ ಕಾರು ಮಗುಚಿ ಬಿದ್ದಿದೆ. ಆದರೆ, ಯಾರಿಗೂಗಾಯಗಳಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.