ADVERTISEMENT

ಅಡಿಗಾಸ್‌ ಯಾತ್ರಾದಿಂದ ಭಾರತ ದರ್ಶನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 14:00 IST
Last Updated 9 ಜುಲೈ 2021, 14:00 IST

ಬೆಂಗಳೂರು: ಪ್ರವಾಸೋದ್ಯಮ ಕ್ಷೇತ್ರದಲ್ಲಿ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯು ಪ್ರವಾಸಿಗರಿಗಾಗಿ ಭಾರತ ದರ್ಶನ ಕಾರ್ಯಕ್ರಮ ರೂಪಿಸಿದೆ.

‘ಪ್ರವಾಸಿಗರನ್ನು ಸುಲಭವಾಗಿ ಹಾಗೂ ವಿಶೇಷ ರಿಯಾಯಿತಿಯೊಂದಿಗೆ ಕಾಶಿ, ಗಯಾ, ಚಾರಧಾಮ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರ, ಸಿಕ್ಕಿಂ, ಡಾರ್ಜಿಲಿಂಗ್‌, ವೈಷ್ಣೋದೇವಿ ಹೀಗೆ ಅನೇಕ ಪ್ರಸಿದ್ಧ ಹಾಗೂ ಮನಮೋಹಕ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಪ್ರವಾಸಿಗರು ತಾವು ಇಚ್ಛಿಸಿದ ದಿನಗಳಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಮಾಡಬಹುದು’ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ನಾಗರಾಜ ಅಡಿಗ ತಿಳಿಸಿದ್ದಾರೆ.

‘ಕಾಶ್ಮೀರ, ಶಿಮ್ಲಾ, ಮನಾಲಿ, ನೈನಿತಾಲ್‌ ಹಾಗೂ ಅಂಡಮಾನ್‌ ಪ್ರವಾಸ ಕೈಗೊಳ್ಳುವವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಧುಚಂದ್ರಕ್ಕೆ ಹೋಗಲು ಸಿದ್ಧವಿರುವ ನವಜೋಡಿಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ‍ಪ್ಯಾಕೇಜ್‌ ರೂಪಿಸಲಾಗಿದೆ. ಸಂಸ್ಥೆಯು ನೇಪಾಳ, ಭೂತಾನ್‌, ಮುಕ್ತಿನಾಥ, ಲಡಾಖ್‌ ಹಾಗೂ ಇತರ 40 ಸ್ಥಳಗಳಿಗೆ ಪ್ರವಾಸ ಆಯೋಜಿಸಿದೆ. 5ರಿಂದ 10ದಿನಗಳ ಈ ಪ್ರವಾಸಕ್ಕೆ ಈಗಾಗಲೇ ದಿನಾಂಕವನ್ನೂ ನಿಗದಿಪಡಿಸಲಾಗಿದೆ. 9 ದಿನಗಳ ಕಾಶಿ–ಗಯಾ ಯಾತ್ರೆಯೂ ನಿಗದಿಯಾಗಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು. 12 ತಿಂಗಳ ಮಾಸಿಕ ಯೋಜನೆಯನ್ನೂ ಜಾರಿಗೊಳಿಸಲಾಗಿದ್ದು, ಪ್ರವಾಸಿಗರು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.

ADVERTISEMENT

ಹೆಚ್ಚಿನ ಮಾಹಿತಿಗೆ www.adigasyatra.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸಂಪರ್ಕಕ್ಕೆ: 7022259002 (ಹುಬ್ಬಳ್ಳಿ), 7022259008 (ಬಸವನಗುಡಿ), 7022259003 (ಮಲ್ಲೇಶ್ವರ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.