ADVERTISEMENT

ಬನವಾಸಿ ತಾಲ್ಲೂಕಾಗಿ ಘೋಷಿಸಲಿ: ‍ಪಾಪು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 20:15 IST
Last Updated 13 ಅಕ್ಟೋಬರ್ 2018, 20:15 IST

ಬನವಾಸಿ (ಶಿರಸಿ): 'ರಾಜ್ಯ ಸರ್ಕಾರಕ್ಕೆ ಇತಿಹಾಸದ ಬಗ್ಗೆ ಗೌರವವಿದ್ದರೆ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು' ಎಂದು ಸಾಹಿತಿ ಪಾಟೀಲ ಪುಟ್ಟಪ್ಪ ಆಗ್ರಹಿಸಿದರು.

ಇಲ್ಲಿ ಶನಿವಾರ ಆಯೋಜಿಸಿದ್ದ ‘ಪಂಪ ಮಹಾಕವಿ ಸುತ್ತಮುತ್ತ’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದ ಅವರು, ’ಪಂಪ ಎಲ್ಲಿ ಹುಟ್ಟಿದ್ದು ಎಂಬುದು ಮುಖ್ಯವಲ್ಲ. ಪಂಪನ ಮೂಲದ ಬಗೆಗಿನ ವಾದ ಅಪ್ರಸ್ತುತ. ಬನವಾಸಿ ಪ್ರದೇಶದಲ್ಲಿ ಆತನ ಸಾಹಿತ್ಯ ಏಳ್ಗೆಯಾಗಿದೆ ಎಂಬುದು ಸತ್ಯ ಸಂಗತಿ. ಬನವಾಸಿಯೇ ಪಂಪನ ನೆಲೆವೀಡು. ಪಂಪ ಪ್ರಶಸ್ತಿ ವಿತರಣೆಗೆ ಯೋಗ್ಯ ಸ್ಥಳ ಬನವಾಸಿ’ ಎಂದರು.
‘ಐತಿಹಾಸಿಕ ಮಹತ್ವವಿರುವ ಬನವಾಸಿ ಹಾಗೂ ರಾಷ್ಟ್ರಕೂಟರ ರಾಜಧಾನಿ ಮಾಳಖೇಡ ಈ ಎರಡೂ ಸ್ಥಳಗಳು ತಾಲ್ಲೂಕಾಗಬೇಕು. ಶತಾಯಗತಾಯ ಇದು ಆಗಲೇಬೇಕು. ನಾನು ಮೊದಲಿನಿಂದಲೂ ಇದನ್ನು ಪ್ರತಿಪಾದಿಸುತ್ತಾ ಬಂದಿದ್ದೇನೆ. ಕನ್ನಡಿಗರ ಭಾವನೆಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಗ್ರ ಕನ್ನಡ ನಾಡು ಬನವಾಸಿಯ ಹಿಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT