ADVERTISEMENT

ಪರಿಷತ್‌ ಚುನಾವಣೆ: ಬಾಬುರಾವ್‌ ಚಿಂಚನಸೂರು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 7:06 IST
Last Updated 1 ಆಗಸ್ಟ್ 2022, 7:06 IST
ಬಾಬುರಾವ್‌ ಚಿಂಚನಸೂರು ನಾಮಪತ್ರ ಸಲ್ಲಿಕೆ
ಬಾಬುರಾವ್‌ ಚಿಂಚನಸೂರು ನಾಮಪತ್ರ ಸಲ್ಲಿಕೆ   

ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್‌ ಚಿಂಚನಸೂರು ಸೋಮವಾರ ನಾಮಪತ್ರ ಸಲ್ಲಿಸಿದರು.

ಪಕ್ಷದ ನಾಯಕರು ಮತ್ತು ಶಾಸಕರ ಜತೆಗೂಡಿ ವಿಧಾನಸೌಧಕ್ಕೆ ಬಂದ ಅವರು ಈ ಚುನಾವಣೆಯ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ದ್ವಿಪ್ರತಿಗಳಲ್ಲಿ ನಾಮಪತ್ರಗಳನ್ನು ಸಲ್ಲಿಸಿದರು.

ನಾಮಪತ್ರದ ಮೊದಲ ಪ್ರತಿಯನ್ನು ಸಲ್ಲಿಸುವಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಂಸದ ಉಮೇಶ್‌ ಜಾಧವ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಅವರು ಬಾಬುರಾವ್‌ ಚಿಂಚನಸೂರು ಅವರ ಜತೆಗಿದ್ದರು.

ADVERTISEMENT

ಎರಡನೇ ಪ್ರತಿಯನ್ನು ಸಲ್ಲಿಸುವಾಗ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ್‌ ಪಾಟೀಲ ಮತ್ತು ಶರಣು ಸಲಗರ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.