ADVERTISEMENT

ಕೆ.ಆರ್.ವೃತ್ತದಲ್ಲಿ ಮತ್ತೊಬ್ಬ ಯುವತಿ ರಂಪಾಟ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 10:47 IST
Last Updated 20 ಏಪ್ರಿಲ್ 2020, 10:47 IST
   

ಬೆಂಗಳೂರು: ನಗರದಲ್ಲಿ ಭಾನುವಾರವಷ್ಟೇ ಯುವತಿಯರಿಬ್ಬರು ರಂಪಾಟ ಮಾಡಿ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ಯುವತಿ ನಗರದಲ್ಲಿ ರಂಪಾಟ ಮಾಡಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.

ಪೊಲೀಸರ ಅನುಮತಿಯಿಲ್ಲದೆ, ಪಾಸು ಪಡೆಯದೆ ಆಟೋವನ್ನು ಬಾಡಿಗೆ ಮಾಡಿಕೊಂಡು ಬಂದಿದ್ದ ಮಹಿಳೆಯನ್ನು ಕೆ.ಆರ್ ಸರ್ಕಲ್ ಬಳಿ ಪೊಲೀಸರು ತಡೆದು ಪ್ರಶ್ನೆ ಮಾಡಿದ್ದರು. ಅದಕ್ಕೆ ರಂಪಾಟ ಮಾಡಿದ್ದ ಮಹಿಳೆ, 'ನನಗೆ ಸಚಿವರು ಗೊತ್ತು. ನಾನ್ಯಾರೂ ನಿನಗೆ ಗೊತ್ತಾ' ಎಂದು ಬೆದರಿಸಿದ್ದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT