ADVERTISEMENT

ಸಚಿವ ಸಂಪುಟದಲ್ಲಿ ವಲಸಿಗರದ್ದೇ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 19:27 IST
Last Updated 4 ಆಗಸ್ಟ್ 2021, 19:27 IST
ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ
ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ   

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ, ಪಕ್ಷದ ಮೂಲ ಕಾರ್ಯಕರ್ತರಾಗಿ ಬೆಳೆದು ಬಂದವರಿಗಿಂತಲೂ ಹೊರಗಿನಿಂದ ಬಂದ ‘ವಲಸಿಗ’ರೇ ಹೆಚ್ಚಿನ ಸಂಖ್ಯೆಯಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ಮುಖ್ಯಮಂತ್ರಿಯೂ ಸೇರಿದಂತೆ 16 ಮಂದಿ ವಲಸಿಗರಿದ್ದಾರೆ!

ಮೂಲದಿಂದ ಬಿಜೆಪಿಯಲ್ಲೇ ಬೆಳೆದಿರುವ ಕೆ.ಎಸ್‌.ಈಶ್ವರಪ್ಪ, ಆರ್‌. ಅಶೋಕ, ಎಸ್‌. ಅಂಗಾರ, ಆರಗ ಜ್ಞಾನೇಂದ್ರ, ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸಿ.ಸಿ. ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್‌, ಮುರುಗೇಶ್ ಆರ್‌. ನಿರಾಣಿ, ಶಶಿಕಲಾ ಜೊಲ್ಲೆ, ಬಿ.ಸಿ. ನಾಗೇಶ್‌, ವಿ. ಸುನೀಲ್‌ ಕುಮಾರ್‌, ಹಾಲಪ್ಪ ಆಚಾರ್‌ ಮತ್ತು ಶಂಕರ ಪಾಟೀಲ್‌ ಮುನೇನಕೊಪ್ಪ ಅವರಿಗೆ ಸಂಪುಟದಲ್ಲಿ ಅವಕಾಶ ದೊರಕಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ, ಉಮೇಶ್ ಕತ್ತಿ ದಶಕದ ಹಿಂದೆ ಜನತಾಪರಿವಾರದಿಂದ ಬಿಜೆಪಿಗೆ ಬಂದವರು. ಜೆ.ಸಿ. ಮಾಧುಸ್ವಾಮಿ ಕೆಲವು ವರ್ಷಗಳ ಈಚೆಗಷ್ಟೇ ಬಿಜೆಪಿ ಸೇರಿದವರು. ಬಿ. ಶ್ರೀರಾಮುಲು ಮತ್ತು ಆನಂದ್‌ ಸಿಂಗ್‌ ಮೂಲದಲ್ಲಿ ಬಿಜೆಪಿಯವರೇ ಆದರೂ, ಒಮ್ಮೆ ಪಕ್ಷದಿಂದ ಹೊರಹೋಗಿ ಮತ್ತೆ ವಾಪಸ್‌ ಬಂದಿರುವವರು.

ADVERTISEMENT

ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌, ಬಿ.ಸಿ. ಪಾಟೀಲ, ಬೈರತಿ ಬಸವರಾಜ, ಡಾ.ಕೆ. ಸುಧಾಕರ್‌, ಕೆ. ಗೋಪಾಲಯ್ಯ, ಎಂ.ಟಿ.ಬಿ. ನಾಗರಾಜು, ಕೆ.ಸಿ. ನಾರಾಯಣ ಗೌಡ ಮತ್ತು ಮುನಿರತ್ನ 2019ರಲ್ಲಿ ‘ಆಪರೇಷನ್‌ ಕಮಲ’ದ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೊರೆದು ಬಿಜೆಪಿ ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.