ADVERTISEMENT

ಕರಡಿ ದಾಳಿ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 5:31 IST
Last Updated 13 ನವೆಂಬರ್ 2018, 5:31 IST
ಸುಮಂಗಲಮ್ಮ ಹಾಗೂ ಬೋರಯ್ಯನ ಹಟ್ಟಿಯ ಸಣ್ಣಪ್ಪ
ಸುಮಂಗಲಮ್ಮ ಹಾಗೂ ಬೋರಯ್ಯನ ಹಟ್ಟಿಯ ಸಣ್ಣಪ್ಪ   

ತುಮಕೂರು: ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮೀನಿಗಳಲ್ಲಿ ಕೆಲಸ ಮಾಡುತ್ತಿದ್ದಇಬ್ಬರ ಮೇಲೆ ಮಂಗಳವಾರ ಬೆಳಿಗ್ಗೆ ಕರಡಿ ದಾಳಿ ನಡೆಸಿದೆ.

ಮೇವು ಕೊಯ್ಯುತ್ತಿದ್ದ ಬೋರಯ್ಯನ ಹಟ್ಟಿಯ ಸಣ್ಣಪ್ಪ ಅವರ ಕೈ ಕಚ್ಚಿದೆ. ಪಕ್ಕದ ಜಮೀನಿನಲ್ಲಿ ಹೂವು ಬಿಡಿಸುತ್ತಿದ್ದ ಸುಮಂಗಲಮ್ಮ ಅವರ ಮೇಲೂ ದಾಳಿಗೆ ಮುಂದಾಗಿದೆ. ಸುಮಂಗಲಮ್ಮ ಓಡಲು ಮುಂದಾಗಿ ಜಾರಿ ಬಿದಿದ್ದಾರೆ. ಕರಡಿ ಅವರನ್ನು ಪರಚಿದೆ.

ಜನರು ಕರಡಿ ನೋಡಿ ಚೀರಾಡಿದ್ದಾರೆ. ಕರಡಿ ಅಲ್ಲಿಂದ ಕಾಲ್ಕಿತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.