ಬೆಂಗಳೂರು: ಬೆಂಗಳೂರು– ಮಂಗಳೂರು ಮಧ್ಯೆ ಸಂಚರಿಸುವ ರಾತ್ರಿ ರೈಲುಗಳ ಸಂಚಾರ ಅ. 10ರಿಂದ ಆರಂಭವಾಗಲಿದೆ. ಹಗಲು ವೇಳೆ ಸಂಚರಿಸುವ ರೈಲುಗಳು ಅ. 11ರಿಂದ ಪ್ರಯಾಣ ಆರಂಭಿಸಲಿವೆ.
ಆ. 14ರಿಂದ ಈ ಮಾರ್ಗದಲ್ಲಿ ಪದೇಪದೇ ಭೂಕುಸಿತವಾದ ಕಾರಣ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಯಶವಂತಪುರ– ಕಣ್ಣೂರು/ ಕಾರವಾರ ಮಧ್ಯೆ ರಾತ್ರಿ ಸಂಚರಿಸುವ ರೈಲು (ಸಂಖ್ಯೆ 16511/16513) ಅ. 10ರಿಂದ ಸಂಚರಿಸಲಿದೆ.
ಕಾರವಾರ– ಯಶವಂತಪುರ ಎಕ್ಸ್ಪ್ರೆಸ್ ಅನ್ನು (ಸಂಖ್ಯೆ 16516) ಅ. 11ರಂದು ರದ್ದುಗೊಳಿಸಲಾಗಿದೆ. ಈ ರೈಲು ಅ. 12ರಿಂದ ಸಂಚರಿಸಲಿದೆ.
ಹಬೀಬ್ಗಂಜ್– ಧಾರವಾಡ ಮಧ್ಯೆ ವಾರಕ್ಕೊಮ್ಮೆ ಸಂಚರಿಸುತ್ತಿರುವ ವಿಶೇಷ ರೈಲು (01664/01663) ಸಂಚಾರ ಅ. 12ರಿಂದಲೂ ಮುಂದುವರಿಯಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.